ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ದಿ. 21/06.2025 ರಂದು ಸಿಂದಗಿಯ ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿಯವರಿಂದ ವಿಕಲಚೇತನರಿಗೆ ಥ್ರೀ ವೀಲರ್ ವಿತರಣೆ ನಂತರ ತಹಶೀಲ್ದಾರ್ ಕಚೇರಿ ಹತ್ತಿರ ಇರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸರಕಾರದಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ನೀಡಿ ಮಾತನಾಡಿ ಭವ್ಯವಾದ ಪ್ರಜಾಸೌಧ ಕಟ್ಟುವ ನಿಟ್ಟಿನಲ್ಲಿ ಅಡಿಗಲ್ಲು ಸಮಾರಂಭ ಆಲಮೇಲ ಪಟ್ಟಣದಲ್ಲಿ ನೆರವೇರಿಸುತ್ತೇನೆ ಎಂದು ಹೇಳಿದರು.
ಈ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯರು, ಹಾಗೂ ಅಳ್ಳೊಳ್ಳಿ ಮಠದ ಶ್ರೀಗಳಾದ ಶ್ರೀಶೈಲಯ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಲಮೇಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಸಾಧಿಕ್ ಸುಂಭಡ ಅವರು ಈ ಇಂದಿರಾ ಕ್ಯಾಂಟೀನ್ ಯಾವುದೇ ಜಾತಿ ಧರ್ಮ ಪಕ್ಷಗಳಿಗೆ ಮೀಸಲಿರುವುದಿಲ್ಲ ಎಂದು ಹೇಳಿದರು.
ಆಲಮೇಲ ತಾಲೂಕು ದಂಡಾಧಿಕಾರಿಗಳಾದ ಕೆ. ವಿಜಯಕುಮಾರ ಮಾತನಾಡಿ ಇದು ಬಡವರ ಕ್ಯಾಂಟೀನ್ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ ಆಲಮೇಲ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಸುರೇಶ ನಾಯಕ ಹಾಗೂ ಸಿಬ್ಬಂದಿ ವರ್ಗ, ಆಲಮೇಲ ತಾಲೂಕು ಪಂಚಾಯಿತಿ EO ರಾಮು ಅಗ್ನಿ, ಶೋಭಾ ಮುದುಗಲ, ಎಪಿಎಂಸಿ ಅಧ್ಯಕ್ಷರಾದ ಬಸವರಾಜ್ ಬಾಗೇವಾಡಿ ಹಾಗೂ ಎಪಿಎಂಸಿಯ ಸರ್ವ ಸದಸ್ಯರು, ಕೆಡಿಪಿ ಅಧ್ಯಕ್ಷ ನೂರ್ ಅಹ್ಮದ್ ಅತ್ತಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕೋಳಾರಿ ಮತ್ತು ಗ್ಯಾರಂಟಿ ಸಮಿತಿ ಸರ್ವ ಸದಸ್ಯರು, ಆಲಮೇಲ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ, ಆಲಮೇಲ ಠಾಣೆಯ ಪಿ ಎಸ್ ಐ ಅರವಿಂದ್ ಅಂಗಡಿ ಹಾಗೂ ಸಿಬ್ಬಂದಿ ವರ್ಗ, ಮತ್ತು ಆಲಮೇಲ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು, ರಾಜಕೀಯ ಮುಖಂಡರು ಭಾಗಿಯಾಗಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ರಮೇಶ್ ಬಂಟನೂರ್ ಮತ್ತು ಪುಂಡಲಿಕ್ j.e ನಡೆಸಿಕೊಟ್ಟರು.
ವರದಿ.ಹಣಮಂತ ಚ. ಕಟಬರ್



















