ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಗ್ಯಾರಂಟಿ ಯೋಜನೆ ಕಾರ್ಯಾಲಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ ಕೋಳಾರಿ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಸರ್ವ ಸದಸ್ಯರು ಸೇರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಅಧಿಕಾರಿಗಳೊಂದಿಗೆ ಚರ್ಚೆ ಗ್ಯಾರಂಟಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಯೋಜನೆಗಳ ಸೌಲಭ್ಯವನ್ನು ಜನರಿಗೆ ಎಷ್ಟರಮಟ್ಟಿಗೆ ತಲುಪುತ್ತಿದೆ ಹಾಗೂ ಯೋಜನೆಗಳ ಸದುಪಯೋಗ ಪ್ರತಿಯೊಬ್ಬರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳಾದ ತಾವು ಕೆಲಸ ಮಾಡಬೇಕು ಎಂದು ಅಧ್ಯಕ್ಷರಾದ ಅಶೋಕ್ ಕೊಳಾರಿ ಸದಸ್ಯರಾದ ರವಿ ಹೋಳಿ ಮಾತನಾಡಿದರು. ಈ ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳಾದ ಮಹೇಶ ಮಾಳವಾಡಕರ, ತಾಲೂಕ ಪಂಚಾಯಿತಿ ಅಧಿಕಾರಿಗಳಾದ ರಾಮು ಅಗ್ನಿ, ಶೋಭಾ ಮುದುಗಲ್, ಹೆಸ್ಕಾಂ ಇಲಾಖೆಯ ಚಂದ್ರಕಾಂತ್ ನಾಯಕ್, ಸಿಡಿಪಿಓ ಇಲಾಖೆಯ ಜಯಶ್ರೀ ದೊಡ್ಡಮನಿ, ಸಾರಿಗೆ ಇಲಾಖೆ ಅಧಿಕಾರಿ ಪ್ರತಿನಿಧಿ ಬಿರಾದಾರ್, ಆಹಾರ ಇಲಾಖೆಯ ರಮೇಶ್ ತಳವಾರ್ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಪ್ರಶಾಂತ ನಾಸಿ, ಅಬ್ದುಲ್ ವಾಹಬ ಸುಂಬಡ್, ಬಸವರಾಜ ನಂದೂರ್, ಕೇದಾರ್ ದೇವರಮನಿ, ಮಾಣಿಕ ಕಲಬಾ, ಡಾಕ್ಟರ್ ಮಲ್ಲು ಪ್ಯಾಟಿ, ಚಂದಸಾಬ್ ಬಳುರಗಿ, ಸಲೀಂ ಕಣ್ಣಿ, ಸಂಗನಗೌಡ ಬಿರಾದಾರ ಮತ್ತು ಸದಾಶಿವ ಪಾಟೀಲ ಈ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ. ಹಣಮಂತ ಚ. ಕಟಬರ್



















