
ದಿ. 8.07.2025 ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಜಿಟ್ಟೇನಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಬೆಳ್ಳಿಯ ರಥದೊಂದಿಗೆ ಕಾಳೇನಹಳ್ಳಿ ಮೂಲಕ ಹೊನ್ನೇನಹಳ್ಳಿ ಮಾರ್ಗವಾಗಿ ಕೇರಳಾಪುರ ಗ್ರಾಮಕ್ಕೆ ತೆರಳಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ವಗ್ರಾಮದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರಾದ ಶ್ರೀಕಂಠಯ್ಯ, ನಾಗರಾಜಣ್ಣ, ಊರಿನ ಹಿರಿಯ ನಾಯಕರು ಆನಂದ್, ಬೇಬಿ ಲತಾ ಕುಮಾರಿ ಗ್ರಾಮ ಪಂಚಾಯಿತಿ ಸದಸ್ಯರು ಸರ್ವತ್ತು, ಗಿರಿ ಗೌಡ, ( ಸ್ವಾಮಿ ಗೌಡ ) ಮಧುಸೂದನ್, ಮುತ್ತುರಾಜ್ ( ಮಧು ), ಸುಪ್ರೀತ್, ಸತಿ, ದಿನೇಶ್, ಪ್ರತಾಪ್, ಸತೀಶ್, ಗಿರೀಶ್ ಸೇರಿದಂತೆ ಎಲ್ಲಾ ಗ್ರಾಮಸ್ಥರು ಸೇರಿ ಅದ್ದೂರಿಯಾಗಿ ಆಚರಿಸಿದರು.
- ಕರುನಾಡ ಕಂದ



















