ಕಲಬುರಗಿ/ ಚಿತ್ತಾಪುರ: ತಹಶೀಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಹಡಪದ ಅಪ್ಪಣ್ಣವರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಿಡಿಪಿಓ ಆರತಿ ತುಪ್ಪದ್, ಶಿರಸ್ತೆದಾರ ಅಶ್ವಥ್ ನಾರಾಯಣ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಹಡಪದ ಕೊಲ್ಲೂರು, ನಗರಾಧ್ಯಕ್ಷ ಮುರುಳಿ ಹಡಪದ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ ಬುಳಕರ್, ಮುಖಂಡರಾದ ಕಲ್ಯಾಣಿ ಗುಂಡುಗುರ್ತಿ, ಶೇಕಣ್ಣ ದಂಡಗುಂಡ, ಕಾಶಿನಾಥ ಝಡ್.ಪಿ, ಭೀಮಾಶಂಕರ, ಅಶೋಕ್ ಹಡಪದ ಚಿತ್ತಾಪುರ, ಸೋಮನಾಥ ಹಡಪದ ಚಿತ್ತಾಪುರ, ಸಿದ್ದು ಹಡಪದ ಚಿತ್ತಾಪುರ, ದೇವಣ್ಣ ಸಂಕನೂರ, ಮಹಾದೇವ ರಾವೂರ್, ಅಶೋಕ್ ವಾಡಿ, ಶಿವಾನಂದ ವಾಡಿ, ಶಿವು ನಾಲವಾರ, ವಿಶ್ವನಾಥ್ ದಿಗ್ಗಾಂವ, ರವಿಚಂದ್ರ ಭಾಗೋಡಿ, ನಾಗರಾಜ್ ಸುಗೂರ ಎನ್ ಸೇರಿದಂತೆ ಇತರರು ಇದ್ದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ



















