ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಥಣಿಯಲ್ಲಿ ಸ್ವಾಭಿಮಾನಿ ಸಂಘರ್ಷ ಸಮಾವೇಶ

ಬೆಳಗಾವಿ: ದಿನಾಂಕ 13/07/2025 ರಂದು ಬೆಳಿಗ್ಗೆ 11:30ಕ್ಕೆ ಅಥಣಿ ನಗರದ ರಾಯಲ್ ಹಾಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಮಿತಿ ಬೆಂಗಳೂರು, ಚಿಕ್ಕೋಡಿ ಜಿಲ್ಲಾ ಹಾಗೂ ಅಥಣಿ ತಾಲೂಕ ಸಮಿತಿ ವತಿಯಿಂದ ಸಂಘರ್ಷ ರೂವಾರಿ , ದಲಿತ ಚಳುವಳಿಯ ಚೇತನ ಪ್ರೊ. ಬಿ ಕೃಷ್ಣಪ್ಪನವರ 87ನೇ ದಿನಾಚರಣೆಯ ಪ್ರಯುಕ್ತ ಅಥಣಿ ನಗರದ ರಾಯಲ್ ಹಾಲ್ ನಲ್ಲಿ ಸ್ವಾಭಿಮಾನಿ ಸಂಘರ್ಷ ಸಮಾವೇಶ ಏರ್ಪಡಿಸಲಾಗಿತ್ತು.

ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು ಚಾಲನೆ ಕೊಟ್ಟರು.

ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಜ್ಞಾನಜ್ಯೋತಿ ಬಂತೇಜಿ ಗೂಗವಾಡ ಇವರು ವಹಿಸಿಕೊಂಡಿದ್ದರು, ಅತಿಥಿಗಳಾಗಿ ಅಥಣಿಯ ಮಾಜಿ ಶಾಸಕರಾದ ಶಹಜಾನ್ ಡೂ೦ಗರಗಾವ್, ಗೌರವಾನ್ವಿತ ಅತಿಥಿಗಳಾದ ಹಾಗೂ ವಕೀಲರಾದ ಮಿತಿಷ್ ಪಟ್ಟಣ, ಪುರಸಭೆ ಸದಸ್ಯರಾದ ಕಲ್ಲೇಶ್ ಮಡ್ಡಿ, ರಾಜಕೀಯ ಮುಖಂಡರಾದ ಅಸ್ಲಾಂ ನಾಲ್ಬಂದ್, ಬುದ್ಧ ವಿಹಾರ ಸಹ ಕಾರ್ಯದರ್ಶಿಗಳಾದ ಪರಶುರಾಮ್ ಚುಬಚಿ, ಅಥಣಿ ತಾಲೂಕ ಸಂಚಾಲಕರಾದ ಸಾಗರ್ ಕಾಂಬಳೆ, ಮಹಿಳಾ ಒಕ್ಕೂಟದ ಅಥಣಿ ತಾಲೂಕ ಸಂಚಾಲಕರಾದ ಗಂಗಾ ಮಾದರ, ಕಪಿಲ ಘಟಕಾಂಬಳೆ, ಸವಿತಾ ಐಹೊಳೆ, ರವಿ ಬನಸೋಡೆ, ಸಿದ್ಧಾರೂಢ ಕಾಂಬಳೆ, ನಿಂದು ಬನಸೋಡೆ, ಮಚ್ಚೇಂದ್ರ ಹದಗನೂರ್ ಸೇರಿದಂತೆ ಇನ್ನೂ ಅನೇಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಮತ್ತು ಅಪಾರ ಜನಸ್ತೋಮ ಪಾಲ್ಗೊಂಡಿತ್ತು.

ವರದಿಗಾರ. ವಿಠ್ಠಲ ಖೋಕಾಟೆ, ಕರುನಾಡ ಕಂದ ಅಥಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!