ಬಾಗಲಕೋಟೆ/ಹುನಗುಂದ: ತಾಲೂಕಿನ ಸೂಳೇಬಾವಿಯ ನಿವೃತ್ತ ಮುಖ್ಯೋಪಾಧ್ಯಾಯ ಗಿರಿಯಪ್ಪ ವೆಂಕಪ್ಪ ವಜ್ರಮಟ್ಟಿ (84) ಗುರುವಾರ ಮಧ್ಯಾಹ್ನ ನಿಧನರಾದರು. ಮರಣಾ ನಂತರ ತಮ್ಮ ದೇಹ ಮಣ್ಣಲ್ಲಿ ಮಣ್ಣಾಗದೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯವಾಗಲಿ ಎಂದು ಮೃತರು 2017 ರಲ್ಲಿ ಬಾಗಲಕೋಟೆ ಶ್ರೀ ಹಾನಗಲ್ಲ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಆ ಪ್ರಯುಕ್ತ ಸಂಜೆ 6-30 ರವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಕುಟುಂಬ ವರ್ಗದವರು ಆಸ್ಪತ್ರೆಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಿದರು.
ಮೃತರು ಪತ್ನಿ, ಮಕ್ಕಳಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರವರ ಆಪ್ತ ಕಾರ್ಯದರ್ಶಿ ಮಹಾಂತೇಶ ವಜ್ಜರಮಟ್ಟಿ, ಹಾಗೂ ಶಿಕ್ಷಕ ಕಿರಣ ವಜ್ಜರಮಟ್ಟಿ ಯವರ ತಂದೆಯವರು ಆಗಿದ್ದಾರೆ., ಮೃತರು ಮೊಮ್ಮಕ್ಕಳು ಸೇರಿದಂತೆ ಅಪಾರ ಅಪಾರವಾದ ಶಿಷ್ಯ ಬಳಗವನ್ನು ಅಗಲಿದ್ದಾರೆ.
- ಕರುನಾಡ ಕಂದ



















