ಗದಗ/ ನರಗುಂದ: ಪಟ್ಟಣದ ನಗೀನಾ ಮಸ್ಜಿದ್ ಕಮಿಟಿಗೆ ಕೂಡಲೇ ಜನರಲ್ ಬಾಡಿ ಸದಸ್ಯರನ್ನು ನೇಮಿಸುವಂತೆ ಗದಗ ಜಿಲ್ಲಾ ವಕ್ಫ್ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದೇಶನ ನೀಡಬೇಕೆಂದು ಗುರುವಾರ ಮುಸ್ಲಿಂ ಮುಖಂಡರು ಆಗ್ರಹಿಸಿದರು.
ನರಗುಂದ ನಗೀನಾ ಮಜೀದ್ ಕಮಿಟಿಗೆ ಜನರಲ್ ಬಾಡಿ ಸದಸ್ಯರ ಎನ್ರೋಲ್ಮೆಂಟ್ ಪ್ರಕ್ರಿಯೆಯನ್ನು ಗದಗ ವಕ್ಫ್ ಜಿಲ್ಲಾಧಿಕಾರಿಗಳು ಈವರೆಗೂ ಪ್ರಾರಂಭಿಸಿಲ್ಲ. ವಕ್ಫ್ ಸಂಸ್ಥೆಯ ಅಭಿವೃದ್ಧಿಗೋಸ್ಕರ ಆದಷ್ಟು ಬೇಗ ಸದಸ್ಯರ ನೇಮಕಾತಿಯ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರುಗಳಾದ ಐ.ಪಿ.ಚಂದೂನವರ, ಎಮ್.ಎಮ್.ಖಾಜಿ, ಇಸ್ಮಾಯಿಲ್ ನಾಲಬಂದ, ಅಬ್ದುಲಸಾಬ ಮುಲ್ಲಾ, ಹಜರತ್ ಅಲಿ ನಾಲಬಂದ, ಡಿ.ಜೆ.ನರಗುಂದ, ಜಾವೇದ್ ಸಕಲಿ, ಇಮಾಮಸಾಬ ನದಾಫ, ರಫೀಕ್ ಅಲವಲ್, ಮಾಬುಸಾಬ್ ಮಕಾಂದಾರ ಸೇರಿ ಇನ್ನಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ



















