ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ದೂರದ ಊರಿಗೆ ಹೋಗುವ ಪ್ರಯಾಣಿಕರಿಂದ ಸದಾ ತುಂಬಿರುತ್ತದೆ, ಬಸ್ ನಿಲ್ದಾಣದಲ್ಲಿ ಕ್ಯಾಮೆರಾಗಳು ಅಳವಡಿಕೆಯಾಗಿದ್ದರೂ ಸಹ ಯಾವುದೇ ಪ್ರಯೋಜನವಿಲ್ಲ ಎನ್ನುವಂತಾಗಿದೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಕ್ಯಾಮೆರಾ ಮುಖಾಂತರ ಪರಿಶೀಲನೆ ಮಾಡಿದಾಗ ಯಾವುದೇ ಸ್ಪಷ್ಟ ಚಿತ್ರ ಅಲ್ಲಿ ಮೂಡದೆ ಇರುವ ಕಾರಣ ಕಳ್ಳರ ಪತ್ತೆ ಹಚ್ಚಲು ಯಾವುದೇ ಪ್ರಯೋಜನವಾಗುತ್ತಿಲ್ಲ ಗುಣಮಟ್ಟದ ಕ್ಯಾಮರಾ ಬಳಕೆ ಮಾಡುವುದರಿಂದ ಕಳ್ಳರ ಗುರುತು ಸಿಗಲು ಕಾರಣವಾಗುತ್ತದೆ ಇದರಿಂದ ಪೊಲೀಸ್ ಇಲಾಖೆಯವರಿಗೂ ಸಹಿತ ಪತ್ತೆ ಹಚ್ಚಿ ಪ್ರಯಾಣಿಕರು ಕಳೆದುಕೊಂಡ ಹಣ ಅಥವಾ ಅವರ ವಸ್ತುಗಳನ್ನು ಹಿಂದಿರುಗಿಸಲು ಸಹಾಯವಾಗುವ ಕಾರಣಕ್ಕಾಗಿ ಪಿಟಿ ಜೆಡ್ ಕ್ಯಾಮೆರಾ ಬಳಕೆ ಮಾಡಲು ಮತ್ತು ಬೆಳಿಗ್ಗೆ ಸಾಯಂಕಾಲದ ಸಮಯದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜು ಬರಲು ಮತ್ತು ಹೋಗಲು ಅವರ ಅನುಪಾತಕ್ಕೆ ತಕ್ಕ ಹಾಗೆ ಬಸ್ ಗಳು ಇಲ್ಲದಿರುವ ಕಾರಣದಿಂದಾಗಿ ಜೋತು ಬಿದ್ದು ಬರುವ ವಿದ್ಯಾರ್ಥಿಗಳ ಸುರಕ್ಷತೆ ಹಿತದೃಷ್ಟಿಯಿಂದ ಪ್ರತ್ಯೇಕ ಬಸ್ ಕಲ್ಪಿಸಲು ಬಸ್ ಘಟಕದ ವ್ಯವಸ್ಥಾಪಕರ ಪರವಾಗಿ ಘಟಕದ ಸಿಬ್ಬಂದಿ ಮೇಲ್ವಿಚಾರಕರಾದ ರಾಮರೆಡ್ಡಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಿನ ಅಧ್ಯಕ್ಷ ಶರಣ ಬಸಪ್ಪ ಎಲ್ಹೇರಿ ಮನವಿ ನೀಡಿ ಶೀಘ್ರವೇ ಕಾರ್ಯರೂಪಕ್ಕೆ ತರಲು ತಿಳಿಸಿದರು.
ಗುರುಮಠಕಲ್ ತಾಲೂಕಿನ ಗೌರವ ಅಧ್ಯಕ್ಷರಾದ ಭೀಮಶಂಕರ್ ಪಡಿಗೆ, ಮೌನೇಶ್ ಮಾದವರ್, ಶರಣು ಮೇಧಾ, ಮಹೇಶ್ ಅಳಿಗೆರಾ, ಬನ್ನು ಕಾಳಬೆಳಗುಂದಿ, ವೆಂಕಟೇಶ್ ಚಿಟಿಕೆನಪಲ್ಲಿ, ಜಗದೀಶ್ ನಸಲ್ ವಾಯಿ, ಕಾಶೀನಾಥ್ ರಾಥೋಡ್, ದೇವಾಸಿಂಗ್, ತಾಯಪ್ಪ, ವೆಂಕಟೇಶ್ ಬೋಯಿನ, ಅನಿಲ್ ಹಿಮ್ಲಾಪೂರ್ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮ.



















