ಶಿವಮೊಗ್ಗ/ಭದ್ರಾವತಿ: ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಕುಂಭಾಶಿ “ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ” ವತಿಯಿಂದ “ಬಂಟರ ಯಾನೆ ನಾಡವರ ಸಂಘ ಹಾಗೂ ಶಬರಿ ಯಕ್ಷಭಿಮಾನಿಗಳ ಬಳಗ” ಭದ್ರಾವತಿ ಸಹಯೋಗದಲ್ಲಿ ಆಗಸ್ಟ್ 09 ರಂದು ಶನಿವಾರ ಸಂಜೆ 6 ಗಂಟೆಯಿಂದ ನ್ಯೂಟೌನ್ ಪೊಲೀಸ್ ಸ್ಟೇಷನ್ ಮುಂಭಾಗದ ಬಂಟರ ಭವನದಲ್ಲಿ “ಕಾರ್ತವೀರಾರ್ಜುನ – ಚಂದ್ರಾವಳಿ ವಿಲಾಸ” ಎಂಬ ಕಥಾನಕ ಯಕ್ಷಗಾನ ಪ್ರಸಂಗವನ್ನು ಹಮ್ಮಿಕೊಳ್ಳಲಾಗಿದೆ.
ಭಾಗವಹಿಸುವ ಹೆಮ್ಮೆಯ ಕಲಾವಿದರು :
ಭಾಗವತರು : ಶ್ರೀ ಹೆಬ್ರಿ ಗಣೇಶ್ (ತೆಂಕು ಬಡಗಿನ ಗಾನಕೋಗಿಲೆ),
ಮದ್ದಳೆ : ಶ್ರೀ ಭರತ್ ಕೋಟೇಶ್ವರ,
ಚಂಡೆ : ಶ್ರೀ ಶ್ರೀಕಾಂತ್ ಶೆಟ್ಟಿ ಯಡಮೊಗೆ,
ಸ್ತ್ರೀ ವೇಷ : ಶ್ರೀ ವಂಡಾರು ಗೋವಿಂದ,
ಶ್ರೀ ಸಂತೋಷ ಹಂಗೊಳ್ಳಿ,
ಶ್ರೀ ವಸುಂಧರ,
ಹಾಸ್ಯ: ಶ್ರೀ ಕ್ಯಾದಗಿ ಮಹಾಬಲೇಶ್ವರ ಭಟ್ ಮತ್ತು ಶ್ರೀ ತಿಮ್ಮಣ್ಣ ಮರಾಠೆ.
ಮುಮ್ಮೇಳ :
ಶ್ರೀ ಆಜ್ರಿ ಅರುಣ್ ಕುಮಾರ್ ಶೆಟ್ಟಿ, ಶ್ರೀ ವಿಶ್ವನಾಥ ಆಚಾರ್ಯ ತೊಂಬಟ್ಟು, ಶ್ರೀ ನಿತೀನ್ ಶೆಟ್ಟಿ ಸಿದ್ದಾಪುರ, ಶ್ರೀ ನಿತ್ಯಾನಂದ ಆಲೂರು, ಶ್ರೀ ರಾಘವೇಂದ್ರ ಆಚಾರ್ಯ ಅಮಾಸೆಬೈಲ್, ಶ್ರೀ ಸಂದೇಶ್ ಶೆಟ್ಟಿ, ಶ್ರೀ ಸುದರ್ಶನ್ ಹಾಗೂ ಇನ್ನಿತರರು.
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಶಬರಿ ಯಕ್ಷಭಿಮಾನಿಗಳ ಬಳಗ ಭದ್ರಾವತಿ ಇವರು ಮಾಡಿಸುವ ಈ ಯಕ್ಷಗಾನ ಕಾರ್ಯಕ್ರಮಕ್ಕೆ ಭದ್ರಾವತಿಯ ಯಕ್ಷಾಭಿಮಾನಿಗಳೆಲ್ಲರೂ ಬಂದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಡಬೇಕೆಂದು ಸುಬ್ಬಣ್ಣ ರೈ: 9343510150 ಹಾಗೂ
ಶಿವರಾಮ ಶೆಟ್ಟಿ: 9480353599
ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ ಕೆ. ಆರ್. ಶಂಕರ್



















