ಬಳ್ಳಾರಿ / ಕಂಪ್ಲಿ :ಪಟ್ಟಣದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಪರಂಪರೆ, ಧಾರ್ಮಿಕ ಆಚರಣೆಗಳು ಇಂದಿಗೂ ನಡೆದುಕೊಂಡು ಬಂದಿವೆ. ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ವಿವಿಧ ಧಾರ್ಮಿಕ ಆಚರಣೆಗಳು ಶ್ರಾವಣ ಮಾಸ ನಿಮಿತ್ಯ ನಡೆದ ಪವಾಡ ಪುರುಷ ಕಲಬುರ್ಗಿ ಶ್ರೀ ಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನದಲ್ಲಿ ಗುರುವಾರ ಶರಣಬಸವೇಶ್ವರ ರವರ ವಿವಾಹ ಕಾರ್ಯಕ್ರಮ ನಡೆಯಿತು.
ವಧು ಕಡೆಯಲ್ಲಿ ಬಾಳೆಕಾಯಿ ಅಮರಪ್ಪ ವರನ ಕಡೆಯಲ್ಲಿ ವಾಗೀಶ್ ಪಾಂಡಿತಾರಾಧ್ಯ ದಂಪತಿಗಳು ವಿವಾಹ ಕಾರ್ಯಕ್ರಮ ನೆರವೇರಿಸಿದರು.
ಪಾಠಶಾಲೆ ಅಧ್ಯಕ್ಷ ಇಟಿಗಿ ಬಸವರಾಜ್ ಗೌಡ, ಪದಾಧಿಕಾರಿಗಳಾದ ಅಲಬನೂರು ಬಸವರಾಜ, ಜಿ.ಹೆಚ್. ಶಶಿಧರ ಗೌಡ, ಗಂಡಿ ಗಣೇಶ, ಟಿ.ಸುರೇಶ್ ಗೌಡ, ಶಂಕರಪ್ಪ ಪ್ರಮುಖರಾದ ಘನಮಠದಯ್ಯ ಹಿರೇಮಠ್, ಕೆ.ಎ. ಹೇಮಯ್ಯಸ್ವಾಮಿ, ಅರವಿ ಬಸನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಜಿಲಾನಸಾಬ್ ಬಡಿಗೇರ




















