ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯಗಳ ಪಿತಾಮಹ ಎಸ್.ಆರ್.ರಂಗನಾಥ್ ರವರ ಜನ್ಮದಿನದ ಪ್ರಯುಕ್ತ ಗ್ರಂಥಪಾಲಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಂಥಪಾಲಕರಾದ ಸಿ.ಜಯಸ್ವಾಮಿರವರು ಸಾರ್ವಜನಿಕರು ಮತ್ತು ವಿದ್ಯಾವಂತರು ಹೆಚ್ಚು ಪುಸ್ತಕಗಳು ಹಾಗೂ ದಿನ ಪತ್ರಿಕೆಗಳನ್ನು ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ. ಅಬ್ದುಲ್ ಮಾಲಿಕ್ ಮಾತನಾಡಿ ಗ್ರಂಥಾಲಯ ಪಾಲಕರ ದಿನಾಚರಣೆ ಪ್ರಯುಕ್ತ ಇಂದಿನ ಯುವಕರು ಮೊಬೈಲ್ ಹೆಚ್ಚು ಬಳಸುವುದನ್ನು ಬಿಟ್ಟು ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದಬೇಕೆಂದರು. ಇದೇ ವೇಳೆ ಗ್ರಂಥಾಲಯ ಸಿಬ್ಬಂದಿಯವರಾದ ಕುಮಾರಿ ಸಿಂಧು, ವಕೀಲರಾದ ಕಾಳಸ್ವಾಮಿ,ಮಹೇಂದ್ರ, ಶಂಕರ್, ಮಿಮಿಕ್ರಿರಾಜು ಸೇರಿದಂತೆ ಪುಸ್ತಕ ಪ್ರಿಯರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್



















