
ಗುಜರಾತ್, ಪಂಜಾಬ್, ಹೈದರಾಬಾದ್, ಚೆನೈ ಮತ್ತು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಕರಕುಶಲ ವಸ್ತುಗಳ ಮಳಿಗೆಗಳು ಸ್ಥಾಪನೆಗೊಂಡಿದ್ದವು. ಗುಜರಾತ್ನಿಂದ ಕುರ್ತಿ, ಬಟ್ಟೆ, ಬ್ಯಾಗ್ಗಳು, ಮಹಿಳೆಯರಿಗೆ ಬಳೆ, ಒಡವೆಗಳು ಮತ್ತು ಸೀರೆಗಳು ಮಾರಾಟಕ್ಕಿದ್ದವು.
ಮೈಸೂರು: ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಮೈಸೂರಿನ ಜೆ. ಕೆ. ಗ್ರೌಂಡ್ ಮೈದಾನದಲ್ಲಿ ” ಸಹಾರಾ ಕಲೆ ಮತ್ತು ಕರಕುಶಲ ಶಾಪಿಂಗ್ ಹಬ್ಬ ” ಆಯೋಜನೆಗೊಂಡಿದೆ. 15 ದಿನಗಳ ಕಾಲ ನಡೆದ ಈ ಪ್ರದರ್ಶನ ಮತ್ತು ಮಾರಾಟ ಮೇಳವು ಜನರನ್ನು ಆಕರ್ಷಿಸಿ, ಖರೀದಿಯ ಉತ್ಸಾಹವನ್ನು ಮೂಡಿಸಿದೆ.
ಈ ಮೇಳದಲ್ಲಿ ಗುಜರಾತ್, ಪಂಜಾಬ್, ಹೈದರಾಬಾದ್, ಚೆನೈ ಮತ್ತು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಕರಕುಶಲ ವಸ್ತುಗಳ ಮಳಿಗೆಗಳು ಸ್ಥಾಪನೆಗೊಂಡಿದ್ದವು. ಗುಜರಾತ್ನಿಂದ ಕುರ್ತಿ, ಬಟ್ಟೆ, ಬ್ಯಾಗ್ಗಳು, ಮಹಿಳೆಯರಿಗೆ ಬಳೆ, ಒಡವೆಗಳು ಮತ್ತು ಸೀರೆಗಳು ಮಾರಾಟಕ್ಕಿದ್ದವು. ಇದೇ ರೀತಿ, ಮನೆ ಅಲಂಕಾರಕ್ಕಾಗಿ ರಾಧಾ-ಕೃಷ್ಣ, ಶಿವ, ಗಣೇಶ, ಬುದ್ಧ ಮತ್ತು ರಾಘವೇಂದ್ರ ಸ್ವಾಮಿಯ ಕಲಾಕೃತಿಗಳು ಸೊಗಸಾಗಿ ಮೂಡಿಬಂದಿದ್ದವು. ಈ ಕಲಾಕೃತಿಗಳು ಜನರ ಗಮನ ಸೆಳೆದವು.
ತಿನಿಸು ಪ್ರಿಯರಿಗೆ ರಾಜಸ್ತಾನದಿಂದ ತಂದ ಮಿಕ್ಸರ್, ಖಾರದ ವಸ್ತುಗಳು, ಉಪ್ಪಿನಕಾಯಿ, ಹಪ್ಪಳಗಳು ಮತ್ತು ಮೈಸೂರಿನ ಮಹಿಳೆಯೊಬ್ಬರು ತಯಾರಿಸಿದ ರಾಗಿ ಹಪ್ಪಳ, ಬೋಟಿ ತಿಂಡಿಗಳು ಲಭ್ಯವಿದ್ದವು. ಇವುಗಳು ಆರೋಗ್ಯಕರ ಮತ್ತು ರುಚಿಕರ ಆಯ್ಕೆಗಳಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದವು.
ಕೈಯಲ್ಲಿ ರಚಿತವಾದ ಆನೆ ಚಿತ್ರಗಳು, ಪುಸ್ತಕ ಮೇಳದಲ್ಲಿ ಕನ್ನಡ ಹೋರಾಟಗಾರರ ಪುಸ್ತಕಗಳು, ಇಂಗ್ಲಿಷ್ ಕವನ ಸಂಕಲನಗಳು ಮತ್ತು ಮನೆ ಅಲಂಕಾರಕ್ಕೆ ಗಡಿಯಾರ, ಉಯ್ಯಾಲೆ, ಮರದ ಟೇಬಲ್ಗಳು ಜನರ ಗಮನ ಸೆಳೆದವು. ಜೊತೆಗೆ, ಪಿಂಗಣಿಯಲ್ಲಿ ತಯಾರಾದ ಲೋಟ, ತಟ್ಟೆ ಮತ್ತು ಪುಟ್ಟ ಗೊಂಬೆಗಳು ಮೇಳಕ್ಕೆ ಮತ್ತಷ್ಟು ಮೆರುಗು ತಂದವು. ಈ ಶಾಪಿಂಗ್ ಹಬ್ಬವು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿದ್ದು, ಮೈಸೂರು ಜನತೆಗೆ ಖರೀದಿಯ ಜೊತೆಗೆ ಸಾಂಸ್ಕೃತಿಕ ಮತ್ತು ಕಲಾತ್ಮಕ ಅನುಭವವನ್ನು ಒದಗಿಸಿದೆ.
ವರದಿ ಜೆ. ಪ್ರದೀಪ್



















