ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮದರಸಾ ಅರೇಬಿಯಾ ಫೈಜಾನೆ ಖಾದ್ರೀಯಾದಲ್ಲಿ ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ 1500ನೇ ಜನ್ಮದಿನ ಅಚರಣೆ

ಕಂಪ್ಲಿ / ಬಳ್ಳಾರಿ : ಪಟ್ಟಣದ ಯಾಸೀನ್ ಕಾಲೋನಿಯಲ್ಲಿರುವ ಮದರಸಾ ಅರೇಬಿಯಾ ಫೈಜಾನೆ ಖಾದ್ರೀಯಾದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಜರತ್ ಪ್ರವಾದಿ ಮಹ್ಮದ್ ಪೈಗಂಬರರವರ 1500ನೇ ಜನ್ಮದಿನವನ್ನು ಶ್ರದ್ಧಭಕ್ತಿಯಿಂದ ಅರ್ಥಪೂರ್ಣವಾಗಿ ಅಚರಿಸಲಾಯಿತು.
ಮುಸ್ಲಿಂ ಧರ್ಮಗುರು ಸೈಯ್ಯದ್‌ಷಾಹ್ ಮೆಹೆಮೂದ್ ಖಾದ್ರಿ ಉರ್ಫ಼್ ರೈಸ್ ಸಾಹೇಬ್ ಸಜ್ಜಾದೇ ನಶೀನ್ ದರ್ಗಾ ಹಟ್ಟಿ ದೀವಾನ್ ಖಾನ್ ಕಂಪ್ಲಿ ರವರು ಮಾತನಾಡಿ ಶಾಂತಿ ಸಂದೇಶ ಸಾರುವ ಪ್ರವಾದಿ ಮಹ್ಮದ್ ಪೈಗಂಬರರು ಬಡವರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ನ್ಯಾಯ, ದುರ್ಬಲರ ನಾಶ, ಅಸಮಾನತೆ, ಅಸೂಯೆ, ಹಿಂಸಾಚಾರ, ಅಂದಾನುಕರಣೆ, ಅನೈತಿಕತೆ ಮತ್ತು ಅನಿಷ್ಟ ಆಚರಣೆಗಳನ್ನು ಮಟ್ಟಹಾಕಲೆಂದು ಜನ್ಮತಾಳಿದವರು ಪೈಗಂಬರರು. ಇಂತಹ ಮಹಾತ್ಮರ ಜನ್ಮದಿನಾಚರಣೆಯನ್ನು ನಾವುಗಳು ಆಚರಿಸದರಷ್ಟೇ ಸಾಲದು ಅವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮದರಸಾ ಅರೇಬಿಯಾ ಫೈಜಾನೆ ಖಾದ್ರಿಗಳು, ಮುಖ್ಯಸ್ಥ ಗುರುಗಳಾದ ಹಜರತ್ ಸೈಯ್ಯದ್‌ಷಾಹ್ ಅಬುತರಾಬ್ ಖಾದ್ರಿ, ಉರ್ಫ಼್ ಲೈಕ್ ಸಾಹೇಬ್ ನೇತೃತ್ವ ವಹಿಸಿದರು. ಮದರಸಾ ಅರೇಬಿಯಾ ಫೈಜಾನೆ ಖಾದ್ರಿಯಾದ ವಿದ್ಯಾರ್ಥಿಗಳಿಗೆ ಮೆಕ್ಕಾ ಮದೀನಗಳ ಸ್ತಬ್ಧ ಚಿತ್ರಗಳ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೆ.ಇ.ಬಿ. ಹತ್ತೀರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪ್ರಮುಖರಾದ
ಎನ್. ಯೂನಸ್‌ಸಾಬ್, ರಫೀಕ್, ಅಬ್ದುಲ್‌ಸಾಬ್, ಮುನೀರಸಾಬ್, ಮೆಹೆಬೂಬ್‌ಸಾಬ್, ಗೌಸ್‌ಸಾಬ್, ಗಪ್ಪೂರಸಾಬ್ ಸೇರಿದಂತೆ ಅನೇಕರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!