
ಗುರುಮಠಕಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಅಂಗವಿಕಲರ ಆರೋಗ್ಯ ತಪಾಸಣೆ ಮತ್ತು UDID (ವಿಶಿಷ್ಟ ಅಂಗವೈಕಲ್ಯ ಐಡಿ)ಪ್ರಮಾಣ ಪತ್ರ ವಿತರಣೆ ಶಿಬಿರ ಜರುಗಿತು.
ಈ ಶಿಬಿರದಲ್ಲಿ ತಜ್ಞವೈದ್ಯರಾದ ಡಾ|| ರಾಘವೇಂದ್ರ, ಡಾ|| ಶರಣಬಸಪ್ಪ, ಡಾ|| ರಾಧಿಕಾ, ಡಾ|| ರಾಮನಗೌಡ, ಡಾ॥ ಅಮೋಘ ಮತ್ತು ಡಾ॥ ಅಮಿತ್ ಭಾಗವಹಿಸಿದರು.
UDID(ವಿಶಿಷ್ಟ ಅಂಗವೈಕಲ್ಯ ಐಡಿ)ಪ್ರಮಾಣ ಪತ್ರ ಮತ್ತು ರೈಲ್ವೇ ಪ್ರಯಾಣದ ಪಾಸ್ ಸೇರಿದಂತೆ ವಿವಿಧ ಸೌಲಭ್ಯದಿಂದ ವಂಚಿತರಾದ ನೂರಕ್ಕೂ ಅಧಿಕ ವಿಕಲಚೇತನರು ಇಂದು ತಜ್ಞ ವೈದ್ಯರಿಂದ ತಪಾಸಣೆಗೆ ಒಳಪಟ್ಟರು.
ಕಡಿಮೆ ದೃಷ್ಠಿದೋಷ, ಬುದ್ದಿಮಾಂದ್ಯ, ಶ್ರವಣದೋಷ, ಪೋಲಿಯೋ ವಿವಿಧ ಬಗೆಯ ಒಟ್ಟು 99 ಜನ ವಿಕಲಚೇತನರು ಭಾಗವಹಿಸಿ ರೈಲ್ವೆ ಪಾಸ್ ಸೌಲಭ್ಯ ಸೇರಿದಂತೆ ಯುಡಿಐಡಿ ಕಾರ್ಡಗಾಗಿ ಶಿಬಿರದಲ್ಲಿ ಅರ್ಜಿ ಸಲ್ಲಿಸಿದರು.
ಇಂದಿನ ಶಿಬಿರದಲ್ಲಿ ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹೇಶ್ ಸಜ್ಜನ, ತಾಲೂಕ ಗ್ರೇಡ್ 2 ತಹಶೀಲ್ದಾರ್ ನರಸಿಂಹ ಸ್ವಾಮಿ, ಗುರುಮಠಕಲ್ ಎಪಿಡಿ ಸಂಸ್ಥೆಯ ತಾಲೂಕ ಸಂಯೋಜಕ ವಿರೂಪಾಕ್ಷ ಮಾಲಿಪಾಟೀಲ ಹಾಗೂ ಸಹಾಯಕರು ಮತ್ತು ಅರ್ ಪಿಡಿ ಟಾಸ್ಕ ಫೋರ್ಸ್ ಸದಸ್ಯರು ಭಾಗವಹಿಸಿ ಶಿಬಿರದ ನಿರ್ವಹಣೆ ಮಾಡಿದರು.
ವರದಿ: ಜಗದೀಶ್ ಕುಮಾರ್ ಭೂಮಾ




















