ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಕುರಿತು ಪತ್ರಿಕಾ ಗೋಷ್ಠಿ

ಗದಗ :ಇಂದು ಲಕ್ಷ್ಮೇಶ್ವರ ತಾಲೂಕಾ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಾಲಯದಲ್ಲಿ ತಾಲೂಕಾ ಅಧ್ಯಕ್ಷರಾದ ಶ್ರೀ ಮಂಜುನಾಥ ಮಾಗಡಿ ಇವರ ಅಧ್ಯಕ್ಷತೆಯಲ್ಲಿ ಪಂಚಮಸಾಲಿ ಸಂಘದ ತಾಲೂಕ ಕಮೀಟಿ ಸದಸ್ಯರು, ಗ್ರಾಮ ಘಟಕಗಳ ಅಧ್ಯಕ್ಷರುಗಳು ಹಾಗೂ ಹಿರಿಯರೊಂದಿಗೆ ಸಭೆ ಸೇರಿ,
ದಿ. 22/09/2025 ರಿಂದ ದಿ. 07/10/2025 ರ ವರೆಗೆ ನಡೆಯುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ರಲ್ಲಿ ಸಮಾಜ ಬಾಂಧವರು ಧರ್ಮದ ಕಾಲಂ ನಲ್ಲಿ “ಹಿಂದೂ”ಎಂದು ಮತ್ತು ಜಾತಿಯ ಕಾಲಂ ನಲ್ಲಿ “ಲಿಂಗಾಯತ ಪಂಚಮಸಾಲಿ”ಎಂದು ಕ್ರಮ ಸಂಖ್ಯೆ A -0868 ನ್ನು ಕಡ್ಡಾಯವಾಗಿ ಬರೆಸಬೇಕೆಂದು ವಿನಂತಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಇದೇ ಸಮಯದಲ್ಲಿ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಲಕ್ಷ್ಮೇಶ್ವರ ತಾಲೂಕಿನ 30 ಗ್ರಾಮಗಳಿಗೆ ಮತ್ತು ಲಕ್ಷ್ಮೇಶ್ವರ ನಗರದ 23 ವಾರ್ಡಗಳಿಗೆ ಭಿತ್ತಿಪತ್ರಗಳನ್ನು ಪಂಚಮಸಾಲಿ ಸಮಾಜದವರ ಮನೆ ಬಾಗಿಲುಗಳಿಗೆ ಅಂಟಿಸಿ ಜಾಗೃತಿ ಮೂಡಿಸುವಂತೆ ಹೇಳಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ದೇವಣ್ಣ ಬಳಿಗಾರ, ಶ್ರೀ ಚಂಬಣ್ಣ ಬಾಳಿಕಾಯಿ, ಶ್ರೀ ಚನ್ನಪ್ಪ ಕರೆಯತ್ತಿನ, ಶ್ರೀ ನೀಲಪ್ಪ ಕರ್ಜಕಣ್ಣವರ, ಶ್ರೀ ಬಸವರಾಜ ಉಮಚಗಿ, ಶ್ರೀ ಮುದ್ದಣ್ಣ ಸಾಲ್ಮನಿ, ಶ್ರೀ ವೀರೇಂದ್ರಕುಮಾರ ಕಟಗಿ, ಶ್ರೀ ಫಕ್ಕೀರೇಶ ಕವಲೂರ, ಮಲ್ಲನಗೌಡ ಪಾಟೀಲ, ಮಂಜುನಾಥ ಗೌರಿ, ಮಲ್ಲಿಕಾರ್ಜುನ ನಿರಾಲೂಟಿ, ಶಿವಾನಂದ ಬಣ್ಣಿಮಟ್ಟಿ, ಜುಂಜನಗೌಡ ನರಸಮ್ಮನವರ, ಮಂಜನಗೌಡ್ರ ಕರಿಗೌಡ್ರ, ಮಂಜುನಾಥ ಹಂಗಣಕಟ್ಟಿ, ಬಸವರಾಜ ಬಳ್ಳೊಳ್ಳಿ, ಭೀಮಣ್ಣ ಹುಲ್ಲೂರ, ಚಂದ್ರು ಮಾಗಡಿ ಹಾಗೂ ಮಾಂತು ಉಮಚಗಿ ಮುಂತಾದವರು ಪಾಲ್ಗೊಂಡಿದ್ದರು.

ವರದಿ ಸತೀಶ್ ಗೋಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!