ಬಳ್ಳಾರಿ / ಕಂಪ್ಲಿ : ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಂದ ಇಡೀ ವಾತಾವರಣ ತಂಪಾಗಿದೆ. ಆದರೆ, ವಿದ್ಯುತ್ ವ್ಯತ್ಯಯ, ಅಲ್ಲಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿರುವುದು ಕಂಡುಬಂತು.
ಹವಾಮಾನ ಇಲಾಖೆ ಸೂಚಿಸಿದಂತೆ ಇವರಂತೆ ಚದುರಿದ ಮಳೆ ಮುಂದುವರೆಯಲಿದೆ ಹಾಗೂ ಶೀತಗಾಳಿ ಇರುತ್ತದೆ ಎಂದು ಸೂಚಿಸಲಾಗಿದೆ. ಮಳೆಯಾಗುತ್ತಿರುವುದರಿಂದ ಮಳೆಯಾಶ್ರಿತ ಭೂಮಿಗಳು, ನೀರಾವರಿ ವ್ಯಾಪ್ತಿಯ ಹೊಲ ಗದ್ದೆಗಳು ತಾಲೂಕಿನಲ್ಲಿ ಭತ್ತ ಬೆಳೆದಿರುವ ಗ್ರಾಮಗಳಲ್ಲಿ ಎಚ್.ಆರ್.ಎಸ್, ಗಂಗಾಕಾವೇರಿ, ಸೋನಾ ಮಸೂರಿ ಹಾಗೂ ಇನ್ನಿತರ ತಳಿಗಳ ಭತ್ತ ಬೆಳೆದ ರೈತರು ಇನ್ನು 20 ದಿನದಲ್ಲಿ ಭತ್ತದ ಬೆಳೆ ಕೈಗೆ ಸೇರುತ್ತದೆ ಎಂಬ ಸಂತಸದಲ್ಲಿದ್ದರು. ಆದರೆ ಬಿಟ್ಟುಬಿಡದೆ ಸೇರುತ್ತಿರುವ ಮಳೆಯಿಂದಾಗಿ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂಬ ದು:ಸ್ಥಿತಿ ರೈತರದ್ದಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















