ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠಾ ಬಿ
ಗ್ರಾಮದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಭವ್ಯ ಪಂಥ ಸಂಚಲನ ನಡೆಸಿದರು ಮಾರ್ಗ ಮಧ್ಯದಲ್ಲಿ ಜನರು ಹೂ ಮಳೆ ಸುರಿದು ಸ್ವಾಗತಿಸಿದರು. ಹನುಮಾನ ಮಂದಿರದಿಂದ ಅಕ್ಕಮಹಾದೇವಿ ಚೌಕ, ಬೊಮ್ಮಗುಂಡೇಶ್ವರ ಮಂದಿರ, ಸಂಗೊಳ್ಳಿ ರಾಯಣ್ಣ ಚೌಕ , ಅಂಬ ಭವಾನಿ ಚೌಕ, ಬಸವೇಶ್ವರ ತುಳಸಿ ಮಹಾರಾಜರ ಚೌಕ ದಿಂದ ಹನುಮಾನ ಮಂದಿರಕ್ಕೆ ಬಂದು ತಲುಪಿತು. ಪಂಥ ಸಂಚಲನದ ಸದಸ್ಯರು ಗಣವೇಷಧಾರಿಗಳಾಗಿ ಗಮನ ಸೆಳೆದರು ಹಿರಿಯರು ಮತ್ತು ಮುದ್ದು ಮಕ್ಕಳು ಬಹಳ ಸಂಖ್ಯೆಯಲ್ಲಿ ಪಾಲ್ಗೊಂಡರು. ಕುಶಾಲ್ ಕೋರೆ ಮಲ್ಲಿಕಾರ್ಜುನ್ ಗಾದ ಗೆ ಸಂಜು ಕುಮಾರ್ ಕೋರೆ ವಿಜಯಕುಮಾರ್ ಮೈನಾಳೆ ರಾಜಕುಮಾರ್ ದೇವರೇ ರತಿಕಾಂತ್ ಹುಮನಾಬಾದ ಧನರಾಜ್ ಬಿರಾದರ್ ಇವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವರದಿಗಾರ ಸಂಗಮೇಶ್ ಚಿದ್ರೆ



















