ಕಾಳಗಿ : ಕಲಬುರಗಿ ನಗರದ ಡಾ. ಎಸ್. ಎಂ ಪಂಡಿತ ರಂಗಮಂದಿರಲ್ಲಿ ಡಾ ರಾಜಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಪ್ರಯುಕ್ತ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ಸೇವ ರತ್ನ ಪ್ರಶಸ್ತಿ ಪ್ರಧಾನ, ಸಂಗೀತ ಕಾರ್ಯಕ್ರಮದಲ್ಲಿ ಕಾಳಗಿ ತಾಲೂಕಿನಲ್ಲಿ ಉತ್ತಮ ಸಮಾಜ ಸೇವೆಯನ್ನು ಮಾಡುತ್ತಿರುವದನ್ನು ಅವರ ಒಳ್ಳೆಯ ಕಾರ್ಯಗಳನ್ನು ಗುರುತಿಸಿ, ಹಲಚೆರಾ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ ಹೊಸಳ್ಳಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಕೊಟ್ಟು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಅಮೇರೇಶ್ವರ್ ಬಾಬುರಾವ ಚಿಂಚನಸೂರ್ ಉದ್ದಿಮೆದಾರರು, ಡಾ. ರಮೇಶ್ ಲಂಡನಕರ್ ಕುಲಸಚಿವರು, ಡಾ ಫಾರೂಖ್ ಮಣುರ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಕಲಬುರ್ಗಿ, ಗೌತಮ ಬೊಮ್ಮನಳ್ಳಿ ಉಪಾಧ್ಯಕ್ಷರು ಸಹಜ ಶಿವ ಸೌಹಾರ್ದ ಸಹಕಾರಿ ಸಂಘ ನಿ ಚಿಂಚೋಳಿ, ರಮೇಶ್ ಯಾಳಗಿ ಅಧ್ಯಕ್ಷರು ಡಾ ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘ, ಲಿಂಗರಾಜು ಸಾಹುಕಾರ್ ಪ್ರಥಮ ದರ್ಜೆ ಗುತ್ತೇದಾರ, ಯಲ್ಲಾ ಲಿಂಗ ದಂಡಿನ ಕಾರ್ಯದರ್ಶಿ, ಶರಣು ಟಿ ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















