
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ
ಸಿದ್ದಾಪುರ ಹಾಗೂ ಕುಪ್ಪಾಳು ಗ್ರಾಮದ ಮಧ್ಯ ಚಿರತೆಯೊಂದು ಕಂಡು ಬಂದಿದೆ.
ಚಿರತೆ ಇಂದು ಕುಪ್ಪಾಳು ಗ್ರಾಮ ಹಾಗು ಸಿದ್ದಾಪುರ ಗ್ರಾಮದ ಸುತ್ತಲೂ ಓಡಾಡುತ್ತಿರುವುದಾಗಿ , ಸಿದ್ದಾಪುರ ನೀಲಗಿರಿ ಫಾರೆಸ್ಟ್ ಲಿ ಕೂಡಾ ಕಾಣಿಸಿರುವುದಾಗಿಯೂ ಮಾಹಿತಿ ಇದೆ . ತುಂಬಾ ದಿನಗಳ ನಂತರ ಕಣ್ಮರೆ ಆಗಿದ್ದ ಚಿರತೆ ಇವತ್ತು ಅಂದರೆ ೨೦/೧೦/೨೦೨೫ ರಂದು ಮುಂಜಾನೆ ೭ ರ ಆಸುಪಾಸು ಕುಪ್ಪಾಳು ಗ್ರಾಮದ ತೋಟದ ಶೆಡ್ ಒಂದರಲ್ಲಿ ಚಿರತೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಂಡು ತೋಟದ ಮಾಲೀಕ ಭಯದಿಂದ ಅಕ್ಕಪಕ್ಕದ ಊರಿನವರಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ ನಂತರ ಜಾಗಕ್ಕೆ ಆಗಮಿಸಿದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಊರಿನವರು ಭಯದಿಂದ ಚಿರತೆಯನ್ನು ನೋಡಿ ಹೆದರಿ ಅರಣ್ಯ ಇಲಾಖೆಗೆ ಕರೆ ಮಾಡಿ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾದರು.
ಸ್ಥಳದಲ್ಲಿ ಜನ ಜಾತ್ರೆ ನೆರೆದಿತ್ತು.
ನಂತರ ಅದಕ್ಕೆ ಎದ್ದೇಳಲು ಸಾಧ್ಯವಾಗದೆ ತುಂಬಾ ನೋವಿಂದ ನರಳಿ ನರಳಿ ಅದಕ್ಕೆ ಏನು ಮಾಡೋಕೆ ಆಗದೆ ಈ ಚಿರತೆಗೆ ತುಂಬಾ ದಿನದ ನೋವು ಇತ್ತು ಅಂತ ಕಾಣಿಸುತ್ತದೆ ಅಷ್ಟು ಜನರ ಸದ್ದು ಗದ್ದಲಕ್ಕೂ ಅಲುಗಾಡದೆ ಹಾಗೆ ಮಲಗಿತ್ತು ನಂತರ ಸ್ಥಳಕ್ಕೆ ವೈದ್ಯರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಬರೋ ವೇಳೆಗೆ ಚಿರತೆ ಕೊನೆ ಉಸಿರು ಎಳೆದಿತ್ತು.
- ಕರುನಾಡ ಕಂದ ಪತ್ರಿಕೆ




















