
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ 2025 – 26ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯದ ಕುರಿತು ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ತಮಟೆಯನ್ನು ನುಡಿಸುವುದರ ಮೂಲಕ ಚಾಲನೆಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಸಿ. ಎಚ್ ಒ. ಶ್ರೀ ದೇವರಾಜ ಪೂಜಾರಿ, ಪಿ.ಎಚ್.ಸಿ.ಒ ಭುವನೇಶ್ವರಿ ಬಳಿಗಾರ, ಆಶಾ ಕಾರ್ಯಕರ್ತೆ ಶ್ರೀಮತಿ ದೀಪಾ ಕರೆಗುಡ್ಡ ಮತ್ತು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರತ್ನಾ ತಳವಾರ ಸೇರಿದಂತೆ ಗ್ರಾಮದ ಹಿರಿಯರು ಚಾಲನೆ ಕೊಟ್ಟರು.
ಶ್ರೀ ಗುರು ಪುಟ್ಟರಾಜ ಸ್ವರ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ತಂಡ ಹನುಮಸಾಗರ ಕಲಾವಿದರಾದ ಸುಕಮುನಿಯಪ್ಪ ಗುಮಗೇರಿ, ದೇವಪ್ಪ ಟೆಂಗುಂಟಿ, ಸಿದ್ದಪ್ಪ ಡಿ. ಕಲಾಲಬಂಡಿ, ಶಿವರಾಯಪ್ಪ ತೆಗ್ಗಿಹಾಳ, ವೆಂಕಟೇಶ ಹನುಮಸಾಗರ, ಮರಿಸ್ವಾಮಿ ನಂದಿಹಾಳ, ಶಶಿಕುಮಾರ ಮನ್ನಾಪುರ, ನಾಗರಾಜ ಮನ್ನಾಪುರ, ನೇತ್ರಾವತಿ ಯಲಬುರ್ಗಾ, ಮಹಾಲಕ್ಷ್ಮೀ ಕೊಪ್ಪಳ ಇವರುಗಳು ಆರೋಗ್ಯ ಇಲಾಖೆಯಿಂದ ಇರುವ ಸೌಲಭ್ಯಗಳು ಸೇರಿದಂತೆ ಸಾಂಕ್ರಾಮಿಕ ರೋಗದ ಬಗ್ಗೆ ಬೀದಿನಾಟಕ ಹಾಗೂ ಹಾಡುಗಳ ಮೂಲಕ ಜನಜಾಗೃತಿಯನ್ನು ಮೂಡಿಸಿದರು.




















