ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಷ್ಟ್ರಮಟ್ಟದ ಕರಾಟೆ ಕ್ರೀಡಾ ಕೂಟದಲ್ಲಿ ಮೇಲುಗೈ ಸಾಧಿಸಿದ ಶಹಾಪುರ ತಾಲೂಕಿನ ಹೆವನ್ ಫೈಟರ್ ಭೀಮಶಂಕರ್ ಗೋಗಿ ತಂಡದ ವಿದ್ಯಾರ್ಥಿಗಳು

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮಶಂಕರ್ ಗೊಗಿ ಅವರ ಹೆವೆನ್ ಫೈಟರ್ ತಂಡದ ಕರಾಟೆ ಪಟುಗಳು ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರಣರೋಚಕ ಪಂದ್ಯಾವಳಿಯಲ್ಲಿ ಮೇಲುಗೈ ಸಾಧಿಸಿದ್ದಾರೆ ಹೆವೆನ್ ಫೈಟರ್ ಸಂಸ್ಥೆಯ ನಿರ್ದೇಶಕರು ಹಾಗೂ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಮಾಸ್ಟರ್ ಮನೋಹರ ಕುಮಾರ್ ಬೀರನೂರ ರವರ ನೇತೃತ್ವದಲ್ಲಿ ಭಾಗವಹಿಸಿ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಜಿಲ್ಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಹೆವೆನ್ ಫೈಟರ್ ತಂಡದ ಶಹಾಪುರ ತಾಲೂಕಿನ ವಿದ್ಯಾರ್ಥಿಗಳು ಒಟ್ಟು 15 ಪದಕಗಳನ್ನು ಪಡೆದುಕೊಂಡಿದ್ದಾರೆ.

ಮೂರು ಬಂಗಾರದ ಪದಕ
ನಾಲ್ಕು ಬೆಳ್ಳಿಯ ಪದಕ
ಎಂಟು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

1) ಶ್ರೀಶೈಲ್ ಹೂಗಾರ್ ಬಂಗಾರ ಮತ್ತು ಬೆಳ್ಳಿಯ ಪದಕ
2) ಗೌರಿ ಪಿ ಕೆ ಒಂದು ಬಂಗಾರ ಪದಕ ಒಂದು ಕಂಚಿನ ಪದಕ
3) ಬಸವರಾಜ್ ಒಂದು ಬಂಗಾರದ ಪದಕ ಒಂದು ಕಂಚಿನ ಪದಕ
4) ಗಗನ್ ಎರಡು ಬೆಳ್ಳಿಯ ಪದಕ
5) ಸಾಗರ್ ಹೂಗಾರ್ ಒಂದು ಬೆಳ್ಳಿಯ ಪದಕ ಒಂದು ಕಂಚಿನ ಪದಕ
6) ಅಜಯ್ ಸಿಂಗ್ ಚೌಹಾಣ್ ಎರಡು ಕಂಚಿನ ಪದಕ
7) ಮೌನೇಶ್ ಬಿ ಒಂದು ಕಂಚಿನ ಪದಕ
8) ಸಂಜಯ್ ಕುಮಾರ್ ಎರಡು ಕಂಚಿನ ಪದಕ ಗಳನ್ನು ಪಡೆದುಕೊಂಡು ಕಲ್ಯಾಣ ಕರ್ನಾಟಕದ ಭಾಗದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.
ಈ ಎಲ್ಲಾ ಪರಿಶ್ರಮಕ್ಕೆ ವಿದ್ಯಾರ್ಥಿಗಳ ಹಠಮಾರಿತನ ಪಟ್ಟು ಬಿಡದ ಪರಿಶ್ರಮ ಕರಾಟೆ ಕೋಚ್ ಭೀಮಾಶಂಕರ್ ಅವರ ಕಠಿಣವಾದ ತರಬೇತಿ ಮೂಲ ಕಾರಣ ಎನ್ನಬಹುದು ಮತ್ತು ಈ ಸಾಧನೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ ಎಸ್ ಅರುಣ್ ಮಾಚಯ್ಯ , ಯಾದಗಿರಿ ಜಿಲ್ಲೆಯ ರಾಜಕೀಯ ಮುಖಂಡರು, ಕ್ರೀಡಾ ಅಭಿಮಾನಿಗಳು ಮತ್ತು ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಸೇವಕರಾದ ಮರಿಯಪ್ಪಣ್ಣ ಮಕಾಶಿ, ವರದಿಗಾರರು ಮತ್ತು ಕರಾಟೆ ಪಟು ಜೆಟ್ಟೆಪ್ಪ ಎಸ್ ಪೂಜಾರಿ
ಹರ್ಷ ವ್ಯಕ್ತಪಡಿಸಿದ್ದಾರೆಂದು
ಕಲ್ಯಾಣ ಕರ್ನಾಟಕ ಹೆವೆನ್ ಫೈಟರ್ ಸಹ ಸಂಘಟನಾ ಕಾರ್ಯದರ್ಶಿ ಸೊಪಣ್ಣ ಮಹಲ್ ರೊಜಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!