
ಕೊಪ್ಪಳ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ
” ಬಡತನ ನಿವಾರಣೋಪಾಯಗಳು” ಎಂಬ ವಿಷಯ ಕುರಿತು, ಪೋಷ್ಟರ್ ತಯಾರಿಕೆ, ಸ್ಪರ್ಧೆಯನ್ನು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ, ಮತ್ತು ಸಹಾಯಕ ಪ್ರಾಧ್ಯಾಪಕಿ, ಶುಭಾ. ಟಿ. ಅವರು ಏರ್ಪಡಿಸಿದ್ದರು.
ಈ ಸ್ಪರ್ಧೆಯಲ್ಲಿ ಬಿ. ಎ, ಬಿ ಕಾಂ, ಒಂದು, ಮೂರು, ಮತ್ತು ಐದನೇ ಸೆಮಿಸ್ಟರ್ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ, ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಶ್ರೀಕಾಂತ ಸಿಂಗಾಪುರ, ಕನ್ನಡ ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ, ವಾಣಿಜ್ಯ ಶಾಸ್ತ್ರದ ಶ್ರೀಮತಿ ಸಂಂತೋಷಿ ಬೆಲ್ಲದ,
ಸ್ಪರ್ಧೆಯ ತೀರ್ಪು ನೀಡಿದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಬಸಮ್ಮ ಅವರು
ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.
- ಕರುನಾಡ ಕಂದ ಪತ್ರಿಕೆ



















