ಬೆಂಗಳೂರು: ಮಲ್ನಾಡ್ ಸೌರಭ ಟ್ರಸ್ಟ್ ನ ಹತ್ತನೆ ವಾರ್ಷಿಕೋತ್ಸವವನ್ನು ನಗರದ ಬಿ. ಎಂ. ಶ್ರೀ ಪ್ರತಿಷ್ಠಾನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾತಿನ ಮನೆಯ ರಾ. ಸು. ವೆಂಕಟೇಶ ಅವರು ಸಾಹಿತ್ಯ ಸಂಸ್ಕೃತಿಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಗುರುತರವಾದ ಹೊಣೆ ನಮ್ಮ ಮೇಲಿದೆ, ಈ ನಿಟ್ಟಿನಲ್ಲಿ ಮಲ್ನಾಡ್ ಸೌರಭ ಟ್ರಸ್ಟ್ ನ ಹತ್ತು ವರ್ಷಗಳ ಸಾಧನೆಗೆ ಪ್ರಶಂಸಿಸುವುದು ಅತ್ಯವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿತರಿಸಲಾದ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರವನ್ನು ಸ್ವೀಕರಿಸಿದ ಪುತ್ತೂರಿನ ಶಾಂತಾ ಕುಂಟಿನಿ ಅವರು ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿದ್ದರು. ಮತ್ತೊಬ್ಬ ಅತಿಥಿಯಾಗಿದ್ದ ಕೆ ವಿ ರಾಮಚಂದ್ರ ಅವರು ಟ್ರಸ್ಟ್ ನ ಮುರಳಿಯವರ ಕಾರ್ಯವನ್ನು ಪ್ರಶಂಸಿಸಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ದೀಪಾ ರಾಘವೇಂದ್ರ ಅವರು ನಿರ್ವಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















