
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮೊಘ ಗ್ರಾಮದಲ್ಲಿ ಕರ್ನಾಟಕ ಅಗ್ರ ಗಣ್ಯ ನಾಯಕರು ಕರ್ನಾಟಕ ಸರಕಾರದ ಸಚಿವರು ಶ್ರೀ ಪ್ರಿಯಾಂಕ ಖರ್ಗೆ ಅವರ ಅವರ ಜನ್ಮ ದಿನದ ನಿಮಿತ್ಯ ದಿನೇಶ್ ತಳವಾರ ಮೊಘ ಅವರ ನೇತೃತ್ವದಲ್ಲಿ ಪ್ರಿಯಾಂಕ್ ಖರ್ಗೆ ಅವರ ಆಶಯದಂತೆ ಶ್ರೀ ರಾಮಲಿಂಗೇಶ್ವರ ಅನುದಾನಿತ ಪ್ರೌಢ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪವನ್ ಕುಲಕರ್ಣಿ, ಗ್ರಾಮ ಪಂಚಾಯತ್ ಸದಸ್ಯರು ನರಸಿಂಗರಾವ್ ಪಾಟೀಲ್, ಶಾಲೆಯ ಮುಖ್ಯ ಗುರುಗಳು ರಾಜಕುಮಾರ ಪೂಜಾರಿ, ಮೋಹನ್ ಮುಕ್ಕುಂದಿ, ಶಾಮರಾವ್ ಮಾಸ್ಟರ್, ನಿಜಾಮ್ ಪಟೇಲ್ ಸೇರಿದಂತೆ ಶಾಲೆಯ ಮಕ್ಕಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್




















