ಗದಗ /ಲಕ್ಷ್ಮೇಶ್ವರ :ದಿ. ಲಕ್ಷ್ಮೇಶ್ವರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿ., ಲಕ್ಷ್ಮೇಶ್ವರ ಇದರ ಸನ್ 2025-2030ನೇ ಸಾಲಿಗೆ ನೂತನ ಆಡಳಿತ ಮಂಡಳಿಗೆ ಆಯ್ಕೆ ಆದವರು
1) ಸೋಮೇಶ ಜಗದೀಶ ಉಪನಾಳ (ಸಾಮಾನ್ಯ)
2) ಶಂಕ್ರಪ್ಪ ಭೀಮಪ್ಪ ದೇಸಾಯಿ (ಸಾಮಾನ್ಯ)
3) ಮಹೇಶ ಬಸೆಟ್ಟೆಪ್ಪ ಹೊಗೆಸೊಪ್ಪಿನ (ಸಾಮಾನ್ಯ) 4) ವಿರುಪಾಕ್ಷಪ್ಪ ಗುಡ್ಡಪ್ಪ ಪಡಿಗೇರಿ (ಪ್ರವರ್ಗ ಅ)
5) ಈರಣ್ಣ ಸೋಮಪ್ಪ ಮುಳಗುಂದ (ಪ್ರವರ್ಗ ಬ)
6) ಜಯಕ್ಕ ದುರಗಪ್ಪ ಕಳ್ಳಿ (ಎಸ್ಸಿ)
7) ಸುರೇಶ ಬಸಪ್ಪ ಬಂಕಾಪೂರ (ಎಸ್ ಟಿ)
8) ರತ್ನಾ ನೀಲಪ್ಪ ಗುಂಜಳ (ಮಹಿಳಾ)
9) ಮೇಘಾ ಪದ್ಮರಾಜ ಪಾಟೀಲ (ಮಹಿಳಾ)
ಮತ್ತು ಸಹಕಾರಿ ಸಂಘಗಳಿಂದ
1) ಸುನೀಲ ಗಂಗಣ್ಣ ಮಹಾಂತಶೆಟ್ಟರ (ಲಕ್ಷ್ಮೇಶ್ವರ)
2) ಶೇಖಪ್ಪ ಮಲ್ಲಪ್ಪ ಕಾಳೆ (ರಾಮಗೇರಿ)
3) ವೀರಭದ್ರಪ್ಪ ಮಹದೇವಪ್ಪ ಶಿಗ್ಲಿ (ಅಡರಕಟ್ಟಿ)
4) ಈರಪ್ಪ ಗುತ್ತೆಪ್ಪ ಮೇಗಲಮನಿ (ಸೂರಣಗಿ)
5) ಬಸವರಾಜ ವಾಲಿಕಾರ (ಅಕ್ಕಿಗುಂದ) ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಜರುಗಿದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಶ್ರೀ ಸೋಮಣ್ಣ ಉಪನಾಳ ಅಧ್ಯಕ್ಷರಾಗಿ ಮತ್ತು ಶೇಖಣ್ಣ ಕಾಳೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಈ ಆಯ್ಕೆಗೆ ಶ್ರಮಿಸಿದ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ಜನಪ್ರಿಯ ಶಾಸಕರಾದ ಡಾ. ಚಂದ್ರು ಲಮಾಣಿ, ನೂಲಿನ ಗಿರಣಿ ಅಧ್ಯಕ್ಷರಾದ ಪುಲಿಕೇಶಿ ಉಪನಾಳ, ಮಾಜಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಪಿ. ಪಾಟೀಲ, ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷರಾದ ಡಿ.ಬಿ.ಬಳಿಗಾರ ಮುಂತಾದವರನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಗದಿಗೆಪ್ಪ ಯತ್ನಳ್ಳಿ, ಪ್ರಕಾಶ ಉಪನಾಳ ನೀಲಪ್ಪ ಹತ್ತಿ ಸೇರಿದಂತೆ ಇತರರು ಹಾಜರಿದ್ದರು.
ವರದಿ – ಸದಾಶಿವ ಭೀ ಮುಡೆಮ್ಮನವರ




















