
ಕನಕಗಿರಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ವತಿಯಿಂದ ಒಂದು ದಿನದ “ಅಗಡಿ ತೋಟ” ಹುಬ್ಬಳ್ಳಿ ಗೆ ಪಾಲಕರ ಸಹಕಾರದೊಂದಿಗೆ ದಿ. :24/12/2024 ರ ಬುಧವಾರದಂದು ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು.

ಶೈಕ್ಷಣಿಕ ಪ್ರವಾಸ ಯಶಸ್ವಿಯಾಗಿದ್ದು ಮಕ್ಕಳು ಪ್ರವಾಸದಲ್ಲಿ ತುಂಬಾ ಸಂತೋಷಪಟ್ಟರು.

ಹಳ್ಳಿಯ ಸೊಗಡಿನ ವಾತಾವರಣ, ಹಿಂದಿನ ಕಾಲದ ಜನರ ಜೀವನ ಶೈಲಿ ಪರಿಚಯಿಸುವ ವೇಷಭೂಷಣ ಪದ್ಧತಿಗಳು, ಕುಂಬಾರಿಕೆಯಲ್ಲಿ ಮಡಿಕೆ, ಬಿಂದಿಗೆ ,ದೀಪದ ಪಣತಿ, ಹೀಗೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಮಕ್ಕಳಿಗೆ ತಿಳಿಸಲಾಯಿತು.
ಜೊತೆಗೆ ಬೋಟ್ , ಟ್ರಾಕ್ಟರ್ ಪ್ರಯಾಣ, ತುಂತುರು ಹನಿಯಲ್ಲಿ ಮನರಂಜನಾತ್ಮಕ ನೃತ್ಯ, ಈಜುಕೊಳದಲ್ಲಿ ಈಜುವಿಕೆ, ಹಾಗೂ ಸಾಹಸಕ್ರೀಡೆಯಾದ ಹಗ್ಗದ ಮೇಲಿನ ನಡಿಗೆ ಮೂಲಕ ಮಕ್ಕಳಿಗೆ ಬ್ಯಾಲೆನ್ಸ್ ಕಂಡುಕೊಳ್ಳುವುದನ್ನು ಕಲಿಸಲಾಯಿತು.
ಇದೆಲ್ಲದರ ಜೊತೆಗೆ ಮಕ್ಕಳ ಮನಸ್ಸಿಗೆ ಖುಷಿ ನೀಡುವ ಮ್ಯೂಸಿಕಲ್ ಡ್ಯಾನ್ಸ್ ತರಬೇತಿ ಕೂಡ ನೀಡಲಾಯಿತು.
ಒಟ್ಟಾರೆಯಾಗಿ ಈ ವರ್ಷದ ಶೈಕ್ಷಣಿಕ ಪ್ರವಾಸ ಮಕ್ಕಳಿಗೆ ತುಂಬಾ ಖುಷಿ ನೀಡಿತು ಎಂದು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿಪ್ರಾಯ ಪಟ್ಟರು.
ಈ ಪ್ರವಾಸವನ್ನು ಕುರಿತು ಶಾಲಾ ಆಡಳಿತ ಮಂಡಳಿ, ಪಾಲಕರು ಹರ್ಷ ವ್ಯಕ್ತಪಡಿಸಿದರು.
ವರದಿ ಹನುಮಂತಪ್ಪ ನಾಯಕ



















