ರಸ್ತೆ ಗುಂಡಿಗಳನ್ನು ಮುಚ್ಚಿ ಜನಮೆಚ್ಚುಗೆ ಪಡೆದ ಅಧಿಕಾರಿಗಳು
ಬಳ್ಳಾರಿ/ ಕಂಪ್ಲಿ : ಕಳೆದ ಕೆಲವು ದಿನಗಳಿಂದ ಕಂಪ್ಲಿ ಪಟ್ಟಣದ ರಸ್ತೆಯಲ್ಲಿರುವ ಶರತ್ ಗ್ಯಾಸ್ ಕಚೇರಿಯ ಎದುರಿನ ರಸ್ತೆಯಲ್ಲಿ ಆಳವಾದ ನೀರಿನ ಗುಂಡಿಗಳು ನಿರ್ಮಾಣವಾಗಿ ” ರಸ್ತೆಗಳಲ್ಲಿ ಗುಂಡಿಗಳದ್ದೇ ಪಾರುಪತ್ಯ, ಅಧಿಕಾರಿಗಳ ನಿರ್ಲಕ್ಷ್ಯ” ಎನ್ನುವ ಶೀರ್ಷಿಕೆಯಡಿಯಲ್ಲಿ ಕರುನಾಡ ಕಂದ.ಕಾಮ್ ನ್ಯೂಸ್ ಪೋರ್ಟಲ್ ನಲ್ಲಿ ದಿ.8-1-2026 ರಂದು ಸುದ್ದಿ ಪ್ರಕಟಿಸಲಾಗಿತ್ತು,
ಸುದ್ದಿ ಪ್ರಕಟಿಸಿದ ನಂತರ ತಕ್ಷಣ ಸ್ಪಂದಿಸಿರುವ ಪುರಸಭೆ ಅಧಿಕಾರಿಗಳು ದಿ.9-1-2026 ರಂದು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿಸಿದ್ದಾರೆ. ವರದಿ ಪ್ರಕಟವಾದ ಒಂದೇ ದಿನದಲ್ಲೇ ದುರಸ್ತಿ ಕಾರ್ಯ ಮಾಡಿದ್ದು, ಜನರು ನಿಟ್ಟಿಸಿರು ಬಿಟ್ಟಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















