ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನುಡಿದಂತೆ ನಡೆದ ಪಿ.ಎನ್.ಕೆ

ಕೊರಟಗೆರೆ ಕ್ಷೇತ್ರದ ದೇವಲಾಯಗಳ ಅಭಿವೃದ್ಧಿಯ ಹರಿಕಾರ ಎಂದು ಪ್ರಸಿದ್ಧರಾಗಿರುವ ಕೋಳಾಲ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ ಎನ್ ಕೃಷ್ಣಮೂರ್ತಿ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಯ ಲಿಂಗಾಪುರ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ದೇವಿಯ ವಿಗ್ರಹವನ್ನು ಸುಮಾರು 2 ಲಕ್ಷ 50,000 ರೂಪಾಯಿಗಳ 55 ಕೆಜಿಯ ವಿಗ್ರಹವನ್ನು ಮಾಡಿಸಿ ಕೊಡುವೆನೆಂದು ಭರವಸೆಯನ್ನು ಕೊಟ್ಟಂತೆ ಇಂದು ಅವರೇ ಖುದ್ದಾಗಿ ಬಂದು ವಿಗ್ರಹವನ್ನು ಮಾಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಕ್ಕೆ ಪಿ ಎನ್ ಕೆ ಆಗಮಿಸಿದಾಗ ಮಹಿಳೆಯರು ಆರತಿ ಮಾಡುವುದರ ಮೂಲಕ ಮುಂದಿನ ಶಾಸಕರು ನೀವೇ ಅಣ್ಣ ಎಂದು ಆಶೀರ್ವದಿಸಿ ಸ್ವಾಗತಿಸಿದರು. ಪಿ ಎನ್ ಕೆ ಮಾತನಾಡಿ ಜನರೊಂದಿಗೆ ಅವರ 20ವರುಷದ ಸ್ನೇಹದ ಒಡನಾಟ ಪ್ರೀತಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಗ್ರಾಮಸ್ಥರು ನಿಮ್ಮ ಜೊತೆ ನಾವು ಇರುತ್ತೇವೆ ನೀವು ಮುಂದಿನ ಶಾಸಕರು ಆಗಬೇಕು ಎಂದು ಆಶೀರ್ವದಿಸಿದರು.

ಕೊರಟಗೆರೆ ತಾಲ್ಲೂಕು ರಕ್ಷಣಾ ವೇದಿಕೆ ಅಧ್ಯಕ್ಷರಾದ ನರಸಿಂಹರಾಜು ಎಲ್ ಮಾತನಾಡಿ ಸುಮಾರು ಐವತ್ತು ವರ್ಷಗಳಿಂದ ದೇವಿಯ ವಿಗ್ರಹ ಮಾಡಿಸಲು ಎಷ್ಟೋ ಜನ ಪ್ರಯತ್ನ ಪಟ್ಟರು ಅದು ನೆರವೇರಿರಲಿಲ್ಲ ಈಗ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕರಾದ ಮಾನ್ಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿಎನ್ ಕೃಷ್ಣಮೂರ್ತಿ ಅವರು ನೆರವೇರಿಸಿ ಕೊಟ್ಟಿದ್ದಾರೆ. ಅವರಿಗೆ ಎಲ್ಲಾ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.

ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!