ಶಿವಮೊಗ್ಗ: ನಗರದ ಪ್ರಖ್ಯಾತ ಲೆಕ್ಕ ಪರಿಶೋಧಕ ಮತ್ತು ವಕೀಲ ಶ್ರೀ ಋಷಿ ಸ್ವಾಮಿ ಅವರನ್ನು ಕರುನಾಡು ಕಂದ ಹಿರಿಯ ಪತ್ರಕರ್ತ ಹಾಗೂ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಬೇಟಿ ಮಾಡಿ ಕರುನಾಡ ಕಂದ ಪತ್ರಿಕೆಯ ಹೊಸ ವರ್ಷದ ಕ್ಯಾಲೆಂಡರ್ ಮತ್ತು ಪತ್ರಿಕೆಯನ್ನು ನೀಡಿ ಶುಭಾಶಯ ಕೋರಿದರು.
ತಮ್ಮ ವಿಧ್ಯಾರ್ಥಿದೆಸೆಯಲ್ಲಿಯೇ ಆತ್ಮೀಯ ಒಡನಾಡಿಯಾಗಿದ್ದ ಶ್ರೀ ಋಷಿ ಸ್ವಾಮಿ ಅವರಿಗೆ ವಿಕಲಚೇತನರ ಸಂಘಟನೆಯ ತಮ್ಮ ಅನುಭವ ಮತ್ತು ಪತ್ರಕರ್ತರು ಎದುರಿಸುವ ಸವಾಲುಗಳನ್ನು ಅವರು ಎಳೆ ಎಳೆಯಾಗಿ ವಿವರಿಸಿದರಲ್ಲದೆ ಸಹಕಾರವನ್ನು ಮುಂದುವರಿಸಬೇಕೆಂದು ಮನವಿ ಮಾಡಿದರು.




















