ಶಿವಮೊಗ್ಗ: ನಗರದ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಚಿನ್ನಪ್ಪನವರು ಧ್ವಜಾರೋಹಣ ಮಾಡುವ ಮೂಲಕ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜರೋಹಣ ನಂತರ ಅಧ್ಯಕ್ಷರಾದ ಚಿನ್ನಪ್ಪನವರು ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿ ದೇಶದ ಒಕ್ಕೂಟದ ವ್ಯವಸ್ಥೆ ಇನ್ನೂ ಗಟ್ಟಿಯಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಾದ ದಯಾನಂದ್, ಜರ್ಜ್ ಕುರಿಯನ್, ಚಂದ್ರಶೇಖರ್ ಎಂ ಬಿ, ಪಿ ವೆಂಕಟೇಶ್, ವಿ ವೆಂಕಟೇಶ್, ಎಂ ಅಣ್ಣಪ್ಪ, ಶಿವಪ್ರಕಾಶ್, ಮಾಲತೇಶ್ ಕೆ, ಅಂತೋನಿ ರಾಜ್, ಹಿದಾಯತ್ ಖಾನ್, ರಮೇಶ್ ಬಾಬು, ಸುಸೈನಾಧನ್, ಅಂತೋಣಿ ಉಪಸ್ಥಿತರಿದ್ದರು ಕೊನೆಯಲ್ಲಿ ಆಟೋಕಾಂಪ್ಲೆಕ್ಸ್ ಆವರಣದ ಮಾಲೀಕರು ಮತ್ತು ವರ್ಕರ್ಸ್ ಎಲ್ಲರಿಗೂ ಸಿಹ ಹಂಚಿ ಸಂಭ್ರಮಿಸಲಾಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್




















