ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹರಿಹರಪುರ ಹೋಬಳಿಯ ಹಾಲುಮುತ್ತುರ್ ಸಮೀಪ ಕೊಪ್ಪ ಮತ್ತು ಕಮ್ಮರಡಿಯ ರಾಜ್ಯ ಹೆದ್ದಾರಿಯಲ್ಲಿ ಕಿರಿದಾದ ಸೇತುವೆ ಅಪಾಯಕ್ಕೆ ಬಾಯಿ ತೆರೆದು ಕುಳಿತಿದೆ. ದಿನನಿತ್ಯ ಸಾವಿರಾರು ವಾಹನಗಳು ಆ ರಸ್ತೆ ಹಾಗೂ ಸೇತುವೆ ಮೇಲೆ ಸಂಚರಿಸುತ್ತಿದ್ದು, ದಿನನಿತ್ಯ ನೂರಾರು ಜನ ಆ ಸೇತುವೆ ಮೇಲೆ ಪ್ರಯಾಣಿಸುತ್ತಿದ್ದು ದಿನನಿತ್ಯ ಜನಪ್ರತಿನಿಧಿಗಳು ಸಹ ಓಡಾಡುತ್ತಿದ್ದರೂ ನೋಡಿಯೂ ಹಗಲು ಕುರುಡರಂತೆ ವರ್ತಿಸುತ್ತಿದ್ದಾರೆ, ಶಾಸಕರು ಹಾಗೂ ಮಾಜಿ ಶಾಸಕರು ತುಂಬಾ ಸಲ ಓಡಾಡಿದ್ದು, ಯಾವತ್ತೂ ಸಹ ಆ ಸೇತುವೆ ಪರಿಸ್ಥಿತಿಯನ್ನು ಅವರು ಅವಲೋಕಿಸಲೇ ಇಲ್ಲ ಯಾಕೆಂದರೆ ಬಡ ಜೀವಗಳ ಬಲಿ ತೆಗೆದುಕೊಳ್ಳುವವರೆಗೂ ಅವರಿಗೆ ಕಣ್ಣಿಗೆ ಕಾಣಿಸುವುದಿಲ್ಲ ಹಾಗೂ ಕಿವಿಗೂ ಕೇಳಿಸುವುದಿಲ್ಲ. ಯಾಕೆಂದರೆ ಅದರಿಂದ ಅಪಾಯವಾದಾಗ ಅಲ್ಲಿ ಬಡ ಜೀವಗಳು ಹೋದಾಗ ರಾಜಕೀಯ ಲಾಭ ಉತ್ತಮವಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ, ಆದರೆ ಊರಿನ ಜನರು ಎಷ್ಟೇ ಮನವಿ ಮಾಡಿಕೊಂಡರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳಬೇಕಾಗಿ ಗ್ರಾಮದ ಜನರು ವಿನಂತಿಸಿದ್ದಾರೆ. ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಹ ಗ್ರಾಮದ ಜನರು ಹೇಳುತ್ತಿದ್ದಾರೆ.
ವರದಿ ಪ್ರಸಾದ್ ಎಚ್ ಬಿ, ತೀರ್ಥಹಳ್ಳಿ.




















