ಬೆಂಗಳೂರು: ದಿನಾಂಕ 14.02.2026 ಎರಡನೇ ಶನಿವಾರ, ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಕೆ . ಪಿ.ಟಿ.ಸಿ.ಎಲ್. ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ, ನಮ್ಮ ಸಂಘದ ಸದಸ್ಯರಾದ ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ಶ್ರೀ ಬಿ ಸತ್ಯನಾರಾಯಣ ಅವರು ರಚಿಸಿದ ಕೃತಿ ಹಂಪಿಯಲ್ಲಿ ರಾಮಾಯಣ ಪುಸ್ತಕ ಬಿಡುಗಡೆ ಹಾಗೂ ಖ್ಯಾತ ಕಥೆಗಾರ, ಕಾದಂಬರಿಕಾರ ರಾಜಶೇಖರ್ ಜೋಗಿನ್ಮನೆ ಅವರ “ಕೇಳು ಧನಂಜಯ” ಪುಸ್ತಕದ ಕುರಿತು ಸಂವಾದ ಹಾಗೂ ಮನಸ್ವಿನಿ ನೃತ್ಯ ನಾಟಕ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಕೊಡಕ್ಕಲ್ ಶಿವಪ್ರಸಾದ್



















