ಸಿಂಧನೂರು.ಫೆ.4 ಇದೇ ಫೆಬ್ರವರಿ 5, 6 ಮತ್ತು 7ರಂದು ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಕವಿಗೋಷ್ಠಿಗೆ ಸಿಂಧನೂರು ತಾಲೂಕಿನಿಂದ ವಿವಿಧ ಕವಿಗಳು ಆಯ್ಕೆಯಾಗಿದ್ದಾರೆ.
ರಾಯಚೂರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ರಾಯಚೂರು ಜಿಲ್ಲಾ ಉತ್ಸವದ ಕವಿಗೋಷ್ಠಿಗೆ ಸಿಂಧನೂರು ತಾಲೂಕಿನ ಹಿರಿಯ ಕವಿಗಳಾದ ಭೀರಪ್ಪ ಶಂಭೋಜಿ, ವೀರೇಶ ಗೋನವಾರ, ಡಾ.ಹುಸೇನಪ್ಪ ಅಮರಾಪುರ, ದುರುಗಪ್ಪ ಗುಡದೂರು, ವೆಂಕಟೇಶ್ ಬಕ್ಕನಟ್ಟಿ, ದೇವೇಂದ್ರ ಹುಡಾ, ಸಣ್ಣಯಲ್ಲಪ್ಪ ಸಾಸಲಮರಿ ಮುಖ್ಯ ಕವಿಗೋಷ್ಟಕ್ಕೆ ಆಯ್ಕೆಯಾಗಿದ್ದಾರೆ.
ಯುವ ಕವಿಗೋಷ್ಠಿಗೆ ಡಾ.ಶರೀಫ್ ಹಸಮಕಲ್ ,
ಶಿವಶಂಕರಾಯ ವಿ.ಎ, ಕ್ಷೀರಲಿಂಗ ಬೊಮ್ಮನಾಳ
ರಮೇಶ ಹಲಗಿ ಆಯ್ಕೆಯಾಗಿದ್ದಾರೆ.
ಮಹಿಳಾ ಕವಿಗೋಷ್ಠಿಗೆ ಶಾಂತ ವಳಗಿನಮನಿ, ಬಸ್ಸಮ್ಮ ಹಿರೇಮಠ, ಸೌಜನ್ಯ ಹಿರೇಮಠ, ಭೀಮಮ್ಮ ಆನೆಗುಂದಿ ಆಯ್ಕೆಯಾಗಿದ್ದಾರೆ.
- ಕರುನಾಡ ಕಂದ ಪತ್ರಿಕೆ



















