ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ದಿನಾಂಕ: 11/02/2026 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಲಿದ್ದು, ಪುತ್ಥಳಿ ಅನಾವರಣದ ಉದ್ಘಾಟಕರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು ಹಿರೇಮಠ ಸುಕ್ಷೇತ್ರ ಹಾರಕೂಡ ಹಾಗೂ ಶ್ರೀ ರವಿಂದ್ರಜೀ ಗಾಯಕವಾಡ ಧಾರಾಶಿವ ಇವರು ನೆರವೇರಿಸಲಿದ್ದು, ಈ ಭವ್ಯ ಕಾರ್ಯಕ್ರಮದ ಅಧ್ಯಕ್ಷರಾಗಿ ಬಸವಕಲ್ಯಾಣ ಶಾಸಕರಾದ ಮಾನ್ಯ ಶ್ರೀ ಶರಣು ಸಲಗರ ರವರು ಭಾಗಿಯಾಗಲಿದ್ದಾರೆ, ಪ್ರಮುಖ ಅತಿಥಿಗಳಾಗಿ ಶ್ರೀ ಮಾನ್ಯ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚೀವರು ಹಾಗೂ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಬೆಂಗಳೂರು, ಶ್ರೀ ಸಾಗರ ಖಂಡ್ರೆ ಸಂಸದರು ಬೀದರ್, ಶ್ರೀ ಮಾರುತಿರಾವ ಮುಳೆ, ವಿಧಾನ ಪರಿಷತ್ ಸದಸ್ಯರು, ಶ್ರೀ ಪ್ರಭು ಚವ್ಹಾಣ ಶಾಸಕರು ಔರಾದ, ಶ್ರೀ ಸಿದ್ದು ಪಾಟೀಲ ಶಾಸಕರು ಹುಮನಾಬಾದ, ಶ್ರೀಮತಿ ಮಾಲಾ ಬಿ. ನಾರಾಯಣರಾವ ಅಧ್ಯಕ್ಷರು ಮೀನುಗಾರಿಕೆ ಇಲಾಖೆ, ಶ್ರೀ ಬಾಬು ಹೊನ್ನಾನಾಯಕ ಕಾಡಾ ಅಧ್ಯಕ್ಷರು, ಶ್ರೀ ರಾಜಶೇಖರ ಪಾಟೀಲ ಮಾಜಿ ಮಂತ್ರಿಗಳು, ಶ್ರೀ ಭಿಮರಾವ ಪಾಟೀಲ ವಿಧಾನ ಪರಿಷತ್ ಸದಸ್ಯರು, ಶ್ರೀ ವಿಜಯಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು ಬೀದರ, ಶ್ರೀ ಮಲ್ಲಿಕಾರ್ಜುನ ಖುಬಾ ಮಾಜಿ ಶಾಸಕರು ಬಸವಕಲ್ಯಾಣ, ಶ್ರೀ ಕಿರಣ ಗಾಯಕವಾಡ ನಗರಾಧ್ಯಕ್ಷರು ಉಮ್ಮರಗಾ, ಶ್ರೀ ದಿಗಂಬರರಾವ ಮಾಣಕರೆ ಅಧ್ಯಕ್ಷರು ಕ್ಷತ್ರಿಯ ಮರಾಠಾ ಪರಿಷತ್ ಬೀದರ, ಶ್ರೀ ಪದ್ಮಾಕರ ಪಾಟೀಲ ಮಾಜಿ ಜಿ.ಪಂ. ಅಧ್ಯಕ್ಷರು ಬೀದರ, ಶ್ರೀ ಅಂಗದರಾವ ಜಗತಾಪ ಮರಾಠಾ ಸಮಾಜ ಮುಖಂಡರು ಬಸವಕಲ್ಯಾಣ, ಶ್ರೀ ಅನಿಲ ಭುಸಾರೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಬೀದರ, ಶ್ರೀ ಧನರಾಜ ತಾಡಂಪಳ್ಳಿ ಅಧ್ಯಕ್ಷರು ಕೆ.ಪಿ.ಸಿ.ಸಿ. ಸಹಕಾರ ಸಂಘ ಬೆಂಗಳೂರು, ಶ್ರೀ ಜ್ಞಾನೇಶ್ವರ ಮುಳೆ ಬಿ.ಜೆ.ಪಿ. ತಾಲೂಕು ಅಧ್ಯಕ್ಷರು ಬಸವಕಲ್ಯಾಣ, ಶ್ರಿ ತಾತೇರಾವ ಪಾಟೀಲ ಮಾಜಿ ಗ್ರಾಂ.ಪಂ. ಅಧ್ಯಕ್ಷರು ಇಸ್ಲಾಂಪೂರ, ಶ್ರೀ ಓಂಪ್ರಕಾಶ ಪಾಟೀಲ , ಶ್ರೀ ವಿ.ಟಿ. ಶಿಂಧೆ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ



















