
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಅಶ್ವಾರೂಢ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು.
ಪುತ್ಥಳಿ ಅನಾವರಣದ ಉದ್ಘಾಟಕರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು ಹಿರೇಮಠ ಸುಕ್ಷೇತ್ರ ಹಾರಕೂಡ ಇವರ ಅಮೃತಹಸ್ತದಿಂದ ನೆರವೇರಿತು.
ಈ ಭವ್ಯ ಕಾರ್ಯಕ್ರಮದ ಅಧ್ಯಕ್ಷರಾಗಿ ಬಸವಕಲ್ಯಾಣ ಶಾಸಕರಾದ ಮಾನ್ಯ ಶ್ರೀ ಶರಣು ಸಲಗರ ರವರು ಭಾಗಿಯಾಗಿದ್ದರು.
ಪ್ರಮುಖ ಅತಿಥಿಗಳಾಗಿ ಶ್ರೀ ಬಾಬು ಹೊನ್ನಾನಾಯಕ ಕಾಡಾ ಅಧ್ಯಕ್ಷರು, ಶ್ರೀ ಪದ್ಮಾಕರ ಪಾಟೀಲ ಮಾಜಿ ಜಿ.ಪಂ. ಅಧ್ಯಕ್ಷರು ಬೀದರ, ಶ್ರೀ ಅಂಗದರಾವ ಜಗತಾಪ ಮರಾಠಾ ಸಮಾಜ ಮುಖಂಡರು ಬಸವಕಲ್ಯಾಣ, ಶ್ರೀ ಅನಿಲ ಭುಸಾರೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಬೀದರ, ಶ್ರೀ ಜ್ಞಾನೇಶ್ವರ ಮುಳೆ ಬಿ.ಜೆ.ಪಿ. ತಾಲೂಕು ಅಧ್ಯಕ್ಷರು ಬಸವಕಲ್ಯಾಣ, ಶ್ರಿ ತಾತೇರಾವ ಪಾಟೀಲ ಮಾಜಿ ಗ್ರಾಂ.ಪಂ. ಅಧ್ಯಕ್ಷರು ಇಸ್ಲಾಂಪೂರ, ಶ್ರೀ ಓಂಪ್ರಕಾಶ ಪಾಟೀಲ , ರಾಜಕುಮಾರ ಸಿರಗಾಪೂರ, ಸಿದ್ರಾಮಪ್ಪ ಗುದಗೆ, ಸದಾನಂದ ಪಾಟೀಲ, ವಿಕಾಸ ಪಾಟೀಲ, ಸಿದ್ದು ಬಿರಾದಾರ, ಗ್ರಾಮದ ಮುಖಂಡರುಗಳಾದ ದಶರಥ ಪಾಟೀಲ, ಶಶಿಕಾಂತ ಪಾಟೀಲ, ಹಣಮಂತ ಮೂಲಗೆ ಸೇರಿದಂತೆ, ಮಂಠಾಳ ವೃತ್ತ ನಿರೀಕ್ಷಕರಾದ ಅಮೂಲ ಕಾಳೇ, ಮುಡಬಿ ಪಿ.ಎಸ್.ಐ. ಜೈಶ್ರೀ ಹೊಡಲ್ ಸೇರಿದಂತೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ



















