ಶೇಖ್ ಮೊಹಮ್ಮದ್ ಷಾಜಿ ಅವರ ” ಸಾರೇ ಜಹಾನ್ ಸೇ ಅಚ್ಚ ಹಿಂದುಸ್ತಾನ ಹಮಾರಾ? ತುಮರಾ? ” ಅನ್ನೋ ಕವಿತೆ ವಿಶ್ವ ವಿಖ್ಯಾತ ಹಂಪಿ ಉತ್ಸವದ ಯುವ ಕವಿಗೋಷ್ಠಿಗೆ ಆಯ್ಕೆಯಾಗಿದೆ.
ದಿನಾಂಕ 15-02-2026 ರವಿವಾರದಂದು ಹಂಪಿ ವಿರೂಪಾಕ್ಷ ದೇವಾಲಯದ ಮುಖ್ಯ ವೇದಿಕೆಯಲ್ಲಿ ಕವಿತೆ ವಾಚನವಿದೆ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶ್ರೀನಿವಾಸ ಕ್ಯಾಂಪಿನ ಈ ಪ್ರತಿಭೆ 2019 ರಲ್ಲಿ ಷಾಜಿ ಮುಮ್ತಾಜ್ ನೆನಪಲ್ಲಿ ಎನ್ನುವ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇವರ ಹಲವಾರು ಕವಿತೆಗಳು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಅದ್ರಲ್ಲಿ ಕೆಲವು ಕವಿತೆಗಳೆಂದರೆ, ಪಿರಂಗಿ ಸದ್ದು, ಅದ್ಯಾರೋ ಡಂಗುರ ಹೊಡೆದರು, ಮನುಷ್ಯರಾಗೋಣ, ಮಾಡ್ರನ್ ಬುದ್ಧ, ಶುದ್ಧಿಯಿಂದ ಸುದ್ದಿಯಾದ ಗಾಂಧಿ ಇನ್ನೂ ಹಲವು ಕವಿತೆಗಳು ಓದುಗರನ್ನು ಚಿಂತನೆಗೆ ಒಳಪಡಿಸುತ್ತವೆ. ಹಂಪಿ ಉತ್ಸವದಲ್ಲಿ ಕವಿಗೋಷ್ಠಿಗೆ ಅವಕಾಶ ಸಿಕ್ಕಿರೋದು ಸಂತೋಷ ವಿಷಯ.
- ಕರುನಾಡ ಕಂದ ಪತ್ರಿಕೆ



















