ಆಂಧ್ರಪ್ರದೇಶ : ಗುಡಿಬಂಡ ಮಂಡಲದ ಪಾಳ್ಯಂ ಗ್ರಾಮದ ರಾಮಚಂದ್ರ ಎಂಬವರು ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಈ ದಾರುಣ ಘಟನೆ ಹಿನ್ನಲೆಯಲ್ಲಿ ಹಿಂದೂಪುರಂನಲ್ಲಿ ಅಂಚೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿ ನಿಂಗೇಶ್ವರ ಅವರು ಮಾನವೀಯ ದೃಷ್ಠಿಯಿಂದ ಪ್ರತಿಕ್ರಿಯಿಸಿದ್ದಾರೆ.
ದಿವಂಗತ ಶ್ರೀ ರಾಮಚಂದ್ರ ಅವರ ಕುಟುಂಬಕ್ಕೆ ಅಕ್ಕಿ ಮತ್ತು ಅಗತ್ಯ ವಸ್ತುಗಳನ್ನು ರಾಮಚಂದ್ರ ಅವರ ಪತ್ನಿ ಪದ್ಮಾ ಅವರಿಗೆ ಹಸ್ತಾಂತರಿಸಿ ಈ ಸಂದರ್ಭದಲ್ಲಿ ಅಂಚೆ ಸಹಾಯಕ ರಾಮಚಂದ್ರ ಅವರ ನಿಧನದಿಂದ ತಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವುದು ತಮ್ಮ ಜವಾಬ್ದಾರಿ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಾಮಚಂದ್ರ ಅವರ ಕುಟುಂಬಸ್ಥರು ಅಂಚೆ ಸಹಾಯಕ ನಿಂಗೇಶ್ವರ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸೇವಾ ಕಾರ್ಯಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಶ್ರೀ ನಿಂಗೇಶ್ವರ ಅವರು ನಿರಂತರವಾಗಿ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿದ್ದು ಉಚಿತ ಗಿಡ ನೆಡುವ ಕಾರ್ಯಕ್ರಮಗಳ ಮೂಲಕ ಶ್ರೀ ನಿಂಗೇಶ್ವರ ಅವರು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ತೆಲುಗು ದೇಶಂ ಪಕ್ಷದ ಕ್ಲಸ್ಟರ್ ಪ್ರಭಾರಿ ಚಿತ್ರಶೇಖರ್, ಕೃಷ್ಣಮೂರ್ತಿ, ವೆಂಕಟಾದ್ರಿ, ಸಣ್ಣಪ್ಪ, ಕಾವೇಲಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















