ಬಳ್ಳಾರಿ / ಕಂಪ್ಲಿ : ಪಟ್ಟಣದ ಶ್ರೀ ಕಲ್ಯಾಣಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗಸ್ವಾಮಿಗಳ ಮಾರ್ಗದರ್ಶನದಲ್ಲಿ ಕಂಪ್ಲಿಯ ವೀರಶೈವ ಸಮಾಜದ ಯುವ ಮುಖಂಡರಾದ ಪುಟ್ಟಿ ಸಚಿನ್, ಅರವಿ ಅಮರೇಶಗೌಡ ನೇತೃತ್ವದಲ್ಲಿ ಪಟ್ಟಣದ ಸುಮಾರು ಐವತ್ತಕ್ಕೂ ಅಧಿಕ ಭಕ್ತರು ಶುಕ್ರವಾರ ಬೆಳಗಿನ ಜಾವ ಶ್ರೀಶೈಲ ಭ್ರಮರಾಂಭದೇವಿ ಸಹಿತ ಮಲ್ಲಿಕಾರ್ಜನಸ್ವಾಮಿ ದರ್ಶನಕ್ಕೆ ತೆರಳಿದರು. ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಮತ್ತು ಕಲ್ಯಾಣ ಚೌಕಿಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಕಲ್ಯಾಣ ಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರೀಗಳು ಮತ್ತು ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗ ತಾತನವರು ಪಾದಯಾತ್ರೆಗೆ ಚಾಲನೆ ನೀಡಿದರು. ಮಾರ್ಗಮಧ್ಯೆ ಕುರುಗೋಡು ದೊಡ್ಡಬಸವೇಶ್ವರ ಮತ್ತು ಬಳ್ಳಾರಿಯ ಅಧಿದೇವತೆ ಕನಕದುರ್ಗಮ್ಮ ದೇವಿಯ ದರ್ಶನ ಪಡೆದು ಯಾತ್ರೆಯನ್ನು ಆರಂಭಿಸಿದರು.
ಶ್ರೀಶೈಲ ತಲುಪಿದ ನಂತರ ಶ್ರೀಶೈಲ ಮಲ್ಲಿ ಕಾರ್ಜುನನ ಸ್ಪರ್ಷ ದರ್ಶನ ಮಾಡಿ ನಂತರ ಭ್ರಮಾರಾಂಭ ದೇವಿಯ ದರ್ಶನ ಪಡೆದು ಹಿಂತಿರುಗುವುದಾಗಿ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















