ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ
ಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರ
ಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರ
ಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರ
ಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ ನುಂಗ್ಯಾರ
ಅರಿವಿಲ್ಲದ ನಮ್ಮ ಜನ ಪವಿತ್ರ ವೋಟು ಮಾರಿಬಿಟ್ಟಾರ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ
ವಿದ್ಯಾಸಂಸ್ಥೆ ತೆಗಿತೀವಿ ಅಂತ ದೊಡ್ಡ ದೊಡ್ಡ
ಬಿಲ್ಡಿಂಗ್ ಕಟ್ಟಿಸ್ಯಾರ ಪೀಜು, ಡೊನೇಷನ್
ಹೆಸರಲ್ಲಿ ವ್ಯವಹಾರ ನಡೆಸ್ಯಾರ
ವಿದ್ಯಾ ತಾಯಿ ಹೆಸರಲ್ಲಿ ಇವತ್ತು ಕೆಲವರು ವ್ಯಾಪಾರ ನಡಿಸ್ಯಾರ.
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ
ರೈತ ದೇಶದ ಬೆನ್ನೆಲುಬಂತ ಜಗತ್ತಿಗೆ ಸಾರಿದಾರ
ಬೆಳೆದ ಬೆಳೆಗೆ ಬೆಲೆ ಕೇಳಲು ಹೋದ ರೈತರ ಬೆನ್ನು ಮುರಿದಾರ
ನಾಚಿಕೆ ಇಲ್ಲದ ಕೆಲವು ಹರಾಮಿ ಮಂದಿ ರೈತ ಬೆಳೆದ ಅನ್ನ ತಿಂತಾರ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ
ಸ್ವಾಮಿ ಅಂತ ಕಾವಿ ಹಾಕಿ ಕಾಮದ ಆಟ ನಡಿಸ್ಯಾರ
ಕಾವಿ ಹಾಕಿ ಕೆಲವು ಕಳ್ಳ ಸ್ವಾಮಿಗಳು
ಪವಿತ್ರ ಕಾವಿಗೆ ಕಳಂಕ ತಂದಾರ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರ

- ಮಂಜುನಾಥ ಈರಪ್ಪ ಗುರಿಕಾರ
ಸಾ: ಕಂದಕೂರು
ತಾ:ಕುಷ್ಟಗಿ, ಜಿ:ಕೊಪ್ಪಳ.




















