ಉಡುಪಿ/ ಉಳ್ಳಾಲ: ತಾಲೂಕಿನ ಇರ ಆಚೆಬೈಲು ಪುರಾತನ ಕ್ಷೇತ್ರವಾದ ಶ್ರೀ ಮಲರಾಯ,ಧೂಮಾವತಿ, ಬಂಟ ಮತ್ತು ಪರಿವಾರ ಕ್ಷೇತ್ರದಲ್ಲಿ ದಿನಾಂಕ 16.3.2026 ರಂದು ನೇಮೋತ್ಸವದ ಸಂದರ್ಭದಲ್ಲಿ ಇರ ಶ್ರೀ ನೇಮು ಪೂಜಾರಿ, ಕವಿ ಕಾವ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಬರೆದಿರುವ “ಇರ ಸೈಟ್ ಶ್ರೀ ಅಲಿಮಾರ್ ಆದಿ ರಕ್ತೇಶ್ವರಿ ಕ್ಷೇತ್ರ ” ಕುರಿತು ಬರೆದಿರುವ ಕೃತಿಯನ್ನು ಶ್ರೀ ಅರಸು ಕುರಿಯಾಡಿತ್ತಾಯ ಮೂವರು ದೈವಂಗಳ ಗಡಿ ಪ್ರಧಾನರಾದ ಶ್ರೀ ಭಾಸ್ಕರಯಾನೆ ಮಂಜನ ಪೂಜಾರಿಯವರು ಬಿಡುಗಡೆ ಮಾಡಿದರು.
ದೈವದ ಆರಾಧಕರಾದ ಶ್ರೀ ರವೀಂದ್ರರವರು, ಶ್ರೀ ಇರ ನೇಮೂ ಪೂಜಾರಿ, ಶ್ರೀ ಆನಂದ ಪೂಜಾರಿ, ಶ್ರೀಮತಿ ಶಕೀಲರವರು, ಶ್ರೀ ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು. ಈ ಹಿಂದೆ ಇದೇ ಕ್ಷೇತ್ರದಲ್ಲಿ ದೈವದೇವರಿಂದ ಊರಿಗೆ ಬೆಳಕು ಎಂಬ ಕೃತಿಯನ್ನು ಇರ ನೇಮು ಪೂಜಾರಿ ಬರೆದಿದ್ದು, ಮಾನ್ಯ ಕರ್ನಾಟಕ ಸರಕಾರದ ಈ ಹಿಂದಿನ ಧಾರ್ಮಿಕದತ್ತಿ ಸಚಿವರು, ಮೈಸೂರು ರಾಜ ಮನೆತನದ ಡಾಕ್ಟರ್ ಎಂ.ಜಿ.ಆರ್ ಅರಸು ಮೊದಲಾದ ಗಣ್ಯರು ಇದ್ದ ಧಾರ್ಮಿಕ ಸಭೆಯಲ್ಲಿ ಪರಮ ಪೂಜ್ಯ ಶ್ರೀ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ್ ಸ್ವಾಮೀಜಿ ಮಾಣಿಲಾ ಬಿಡುಗಡೆ ಮಾಡಿದ್ದರು.
ಶ್ರೀ ಕ್ಷೇತ್ರಕ್ಕೆ ಅನಾಧಿಯಲ್ಲಿ ಚಂದ್ರಗಿರಿಯಿಂದ ದೊಡ್ಡಮ್ಮ ಮತ್ತು ಸಣ್ಣಮ್ಮ ಅಕ್ಕ ತಂಗಿಯರು ಜಟಾಧಾರಿಗಳು ಆಚೆ ಬೈಲಿಗೆ ಬಂದು ಯಕ್ಷಗಾನ, ಸಾಹಿತ್ಯ ಪ್ರೀತಿಸಿ,ಪೋಷಿಸಿ, ಬೆಳೆಸಿದ ವಿಚಾರಧಾರೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿತ್ತಲ್ಲದೆ ಕುಂಡಾವೂ ಊರು ಮಹಾ ತಪಸ್ವಿ ಕುಂಡಲಿನಿ ತಪಸ್ಸು ಮಾಡಿದ ಪುಣ್ಯ ಭೂಮಿಯಾಗಿದೆ ಎಂದು ವರದಿಯಾಗಿದೆ.
ಅಲಿಮಾರ್ ಕ್ಷೇತ್ರ ಮಹಾ ಗುರು ಧ್ಯಾನಾಸಕ್ತರಾಗಿ ಜ್ಞಾನದ ಸ್ನಾನ ಮಾಡಿ ಹಾಡಿದ ಮಾತೆಲ್ಲ ಗಾನವಾಗಿದೆ. ಒಟ್ಟಿನಲ್ಲಿ ಯಕ್ಷಗಾನದ ತವರೂರು ನಮ್ಮ ಇರ ಗ್ರಾಮವು ಸಾಹಿತ್ಯವ ಪ್ರೋತ್ಸಾಹಿಸುವ ದೊಡ್ಡ ಮರದಂತೆ ಗೋಚರಿಸುತ್ತಿದೆ. ಹಾವನ್ನು ಹೂವಾಗಿ ಧರಿಸಿದ ಗ್ರಾಮ ದೇವರು ಹರ ಶ್ರೀ ಇರಾ ಸೋಮನಾಥೇಶ್ವರ ದೇವಸ್ಥಾನದ ಸನ್ನಿಧಿ ಕೂಡಾ ಇಲ್ಲಿದೆಯಲ್ಲದೇ ಎಲ್ಲೆಡೆ ಯಕ್ಷಗಾನದ ಸ್ವರ ಹೊಮ್ಮಿಸಿದ ಊರಾಗಿದೆ ಎಂದು ಸ್ಪಷ್ಟಗೊಳ್ಳುತ್ತಿದೆ ಯಲ್ಲದೆ ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ ಹಲವು ದಶಕಗಳಿಂದ ಕಲಾ ಸೇವೆಯಲ್ಲಿ ತೊಡಗಿತ್ತು ಎಂದು ಶ್ರೀ ಇರಾ ನೇಮು ಪೂಜಾರಿ ಅವರು ವಿವರಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು




















