ಹಣೆಯಲಿ ಬೆಳಗುವ ಚಂದಿರನ ಕಾಂತಿ,
ನೋಟದಿ ತುಂಬಿದೆ ಕರುಣೆಯ ಶಾಂತಿ.
ತುಂಬು ಪ್ರೇಮದಲಿ ಕೈಯನು ಮುಗಿಯಲು,
ದೂರವಾಗುವುದು ಬಾಳಿನ ಭೀತಿ ll೦೧ll
ಕೊರಳಲಿ ಮಿಂಚುವ ಮುತ್ತಿನ ಹಾರ,
ಹರಿಸಲಿ ಜ್ಞಾನದ ಅಮೃತ ಧಾರೆ.
ಒಂದೇ ದಂತದ ಆನೆಯ ಮುಖವು,
ತೊಲಗಿಸಲಿ ಎದುರಾದ ವಿಘ್ನಗಳ ಸಾಲು ll೦೨ll
ಅಕ್ಷಯ ಪಾತ್ರೆಯ ಹಿಡಿದಿರುವ ದೇವ,
ನೀನೇ ನಮ್ಮಯ ಬಾಳಿನ ಜೀವ.
ರೂಪವ ಕಂಡರೆ ಹರುಷದ ಹೊನಲು,
ಭಕ್ತಿಲಿ ನಮಿಸುವೆವು ಕೃಪೆಯನು ತೋರಲು ll೦೩ll
ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ, ಮುದ್ದೇಬಿಹಾಳ




















