“ಇದು ಉತ್ತರ ಭಾರತದ ದೃಶ್ಯ ಅಂದುಕೊಂಡ್ರಾ? ಖಂಡಿತ ಅಲ್ಲ! ಇದು ನಮ್ಮ ಧಾರವಾಡ ಜಿಲ್ಲೆಯ ಕಲ್ಘಟಗಿ!
ನಿನ್ನೆ ಸುರಿದ ಭಾರಿ ಆಲಿಕಲ್ಲು ಮಳೆಯಿಂದಾಗಿ ನಮ್ಮ ಊರು ಮಿನಿ ಕಾಶ್ಮೀರದಂತೆ ಬದಲಾಗಿದೆ.”
“ಮಂಗಳವಾರ ಸಂಜೆ ಸುರಿದ ಈ ಮಳೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಮಾಚಾಪುರ ಮತ್ತು ಕಲ್ಘಟಗಿ–ಮುಂಡಗೋಡ ಹೆದ್ದಾರಿಯಲ್ಲಿ ಮೊಣಕಾಲುದ್ದ ಆಲಿಕಲ್ಲುಗಳು ಬಿದ್ದಿವೆ ಪರಿಣಾಮವಾಗಿ ರಸ್ತೆಯೇ ಕಾಣದಂತೆ ಐಸ್ ತುಂಬಿಕೊಂಡಿದೆ!”
ಈ ಆಲಿಕಲ್ಲಿನ ರಾಶಿಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಮಾಚಾಪುರ ಬಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೂಡ ಈ ಐಸ್ ರಾಶಿಯಲ್ಲಿ ಸಿಲುಕಿಕೊಂಡಿತ್ತು. ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
“ಒಂದೆಡೆ ಸಂಚಾರಕ್ಕೆ ತೊಂದರೆಯಾದರೂ, ಜನರು ಈ ಅಪರೂಪದ ದೃಶ್ಯವನ್ನು ನೋಡಿ ಸಂಭ್ರಮಿಸಿದರು.
ವರದಿ ಸುನಿಲ್ ಪಿ. ಸಜ್ಜನ್




















