ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯುಗಾದಿ-ನವ ಭಾವ ಬೆಸುಗೆಯ ಬುನಾದಿ…

ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,
ಹಬ್ಬ – ಹರಿದಿನ ನಿತ್ಯ ಸತ್ಯ,
ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,
ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಸೃಷ್ಟಿಯ ಕಾವ್ಯ ಅತೀ ಭವ್ಯ…

ಮಾವು-ಬೇವಿನ ಹೊಸ ಚಿಗುರಿನ ದೃಶ್ಯ,
ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,
ಮಾಮರ-ಕೋಗಿಲೆಯ ಸಂಬಂಧಗಳ ಬೆಸುಗೆಯ ಸಾಮಿಪ್ಯ,
ಕಿವಿಗಿಂಪಾಗಿ ಕೇಳಿಸುವ ಕೋಗಿಲೆಯ ಸ್ವರ ಅತೀ ಮಾಧುರ್ಯ…

ಹಸಿರು ಮಾವಿನೆಲೆಯ ತೋರಣ,
ಮನೆಯ ಬಾಗಿಲಲ್ಲಿ ರಂಗವಲ್ಲಿಗಳ ಚಿತ್ರಣ,
ಬಗೆ-ಬಗೆಯ ಹೂ ಮಾಲೆಗಳ ಹೊಂಬಣ್ಣ,
ಹೊಸ ಬಗೆಯ ರಂಗು-ರಂಗಿನ ಉಡುಗೆ ತೊಡುಗೆಗಳ ಶೃಂಗಾರದ ಸೌಂದರ್ಯ..

ಬೇವು-ಬೆಲ್ಲದ ಮಿಶ್ರಣ,
ಮೃಷ್ಟಾನ್ನ ಭೋಜನದ ಹೂರಣ,
ಮೊಗವು ಖುಷಿಯ ಹಂಚುವ ತಾಣ,
ನೋವ ಮರೆಯೋಣ,
ಹೊಸ ನಗುಭರಿತ ನಲಿವಿನ ಬದುಕನ್ನು ಸ್ವಾಗತಿಸೋಣ,
ಕೂಡಿ ಬೆರೆತು-ಅರಿತು ಬಾಳೋಣ,
ಪ್ರೀತಿಯ ಹಂಚುತ ಸಾಗೋಣ…

ಹೊಸ ವರುಷ-ಹೊಸ ಹರುಷ, ಸವಿಯ ಉಣಬಡಿಸುವ ಯುಗಾದಿಯು ಬೆಸೆಯುವುದು ಸಂಬಂಧಗಳ ಸ್ಪರ್ಶ…

  • ಶಾಂತಾರಾಮ ಹೊಸ್ಕೆರೆ,
    ಶಿರಸಿ, ಉತ್ತರ ಕನ್ನಡ..
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!