
ಬೈಲಹೊಂಗಲ : ದಿನಾಂಕ: ೦೧-೦೪-೨೦೨೬ ರಂದು ಜನಗಣತಿ ೨೦೨೭ ರ ಪ್ರಯುಕ್ತ ಬೈಲಹೊಂಗಲ ನಗರಸಭೆ ವ್ಯಾಪ್ತಿಯ ಜನಗಣತಿ ಕಾರ್ಯ ಕೈಗೊಳ್ಳುವ ಕುರಿತು ನಗರದ ಗಣತಿದಾರರು ಮತ್ತು ಮೇಲ್ವಿಚಾರಕರುಗಳಿಗೆ ದಿನಾಂಕ: ೦೧-೦೪-೨೦೨೬, ೦೩-೦೪-೨೦೨೬, ೦೪-೦೪-೨೦೨೬ ರವರೆಗೆ ೩ ದಿನಗಳ ಕಾಲ ನಗರದ ಗಣಾಚಾರಿ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಎಜ್ಯೂಕೇಶನ್ ಸೊಸೈಟಿ ಇಲ್ಲಿ ಆಯೋಜಿಸಿದ ಮೊದಲನೆ ಬ್ಯಾಚ್ ತರಬೇತಿ ಕಾರ್ಯಾಗಾರವನ್ನು ತಹಶೀಲ್ದಾರರಾದ ಶ್ರೀ ಹಣಮಂತ ಶಿರಹಟ್ಟಿ ಇವರು ಉದ್ಘಾಟಿಸಿ ಮಾತನಾಡಿ ತರಬೇತಿದಾರರಿಗೆ ಜನಗಣತಿಯ ಮಹತ್ವವನ್ನು ತಿಳಿಸಿ ಜನಗಣತಿ ಕುರಿತಾಗಿ ತಮಗೆ ಹಂಚಿಕೆ ಮಾಡಿದ ಬ್ಲಾಕ್ನಲ್ಲಿ ಇಂದಿನಿಂದ ದಿನಾಂಕ:೧೫-೦೪-೨೦೨೬ ರವರೆಗೆ ಸಂಚರಿಸಿ ಬ್ಲಾಕ್ನ ವ್ಯಾಪ್ತಿ ತಿಳಿದುಕೊಳ್ಳಲು ಹಾಗೂ ದಿನಾಂಕ:೦೧-೦೪-೨೦೨೬ ರಿಂದ ೧೫-೦೪-೨೦೨೬ ರವರೆಗೆ ಸ್ವಯಂ-ಗಣತಿ ಮಾಡಿಕೊಳ್ಳುವಂತೆ ನಾಗರೀಕರಿಗೆ ತಿಳಿಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಸ್ವಯಂ-ಗಣತಿ ಕೈಗೊಂಡು ಪ್ರಗತಿ ಸಾಧಿಸಲು ತಿಳಿಸಿದರು ಹಾಗೂ ದಿನಾಂಕ: ೧೬-೦೪-೨೦೨೬ ರಿಂದ ೧೫-೦೫-೨೦೨೬ ರವರೆಗೆ ಜನವಸತಿ ಕಟ್ಟಡದ ಸ್ಥಿತಿಗತಿ ಲಭ್ಯವಿರುವ ಸೌಲಭ್ಯಗಳು ಮತ್ತು ಸ್ವತ್ತುಗಳ ಬಗೆಗಿನ ವಿಸ್ತೃತ ಮಾಹಿತಿಯನ್ನು ಕಲೆ ಹಾಕಿ ಗಣತಿ ಕಾರ್ಯವನ್ನು ಕೈಗೊಳ್ಳಲು ತಿಳಿಸಿ ಇದು ಗಣತಿಗಾಗಿ ಅಗತ್ಯವಾದ ತಳಪಾಯವಾಗಿದೆ. ಕಾರಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಇದೇ ವೇಳೆ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ ರವರು ಮಾತನಾಡಿ ಗಣತಿ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಯಶಸ್ವಿಗೊಳಿಸುವಂತೆ ತಿಳಿಸಿದರು.
ಫೀಲ್ಡ್ ಟ್ರೇನರ್ ಆದ ಶ್ರೀ ರಾಜು ಹಕ್ಕಿ ಇವರು ಗಣತಿ ಕಾರ್ಯದ ತರಬೇತಿ ನೀಡಿದರು. ಶ್ರೀ ಆರ್. ಎಸ್. ಹಿಟ್ಟಣಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕಛೇರಿ ವ್ಯವಸ್ಥಾಪಕರಾದ ಶ್ರೀ ಎಮ್. ಆಯ್. ಕುಟ್ರಿ, ಪ್ರ.ದ.ಸ. ಶ್ರೀ ಬಿ. ಆಯ್. ಗುಡಿಮನಿ, ಶ್ರೀ ಬಿ. ಎನ್. ಪಾಟೀಲ, ಶ್ರೀ ಎ. ವಾಯ್. ಹೆಗಡೆ, ಶ್ರೀ ಎಸ್. ಎನ್. ಪಾಟೀಲ, ಶ್ರೀ ಎಸ್. ಎಸ್. ನರಗುಂದ ಉಪಸ್ಥಿತರಿದ್ದರು.– ಮಂಜು ಎಂ. ಚಿಕ್ಕಣ್ಣವರ




















