ಕಲಬುರಗಿ/ ಯಡ್ರಾಮಿ ತಾಲೂಕಿನ ಪಂಚಾಯತಿಗಳಲ್ಲಿ 15ನೇ ಹಣಕಾಸು ಸಂಪೂರ್ಣ ದುರ್ಬಳಕೆಯಾಗಿದೆ ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಡ್ರಾಮಿ ತಾಲೂಕಿನ ಎಲ್ಲಾ ಪಂಚಾಯತಗಳಲ್ಲಿ ಸಂಪೂರ್ಣ ತನಿಖೆ ನಡೆಸಬೇಕು ಭ್ರಷ್ಟಾಚಾರವೆಸಗಿದ ತಪ್ಪಿತಸ್ಥ ಪಿಡಿಒ ಗಳನ್ನು ಸಸ್ಪೆಂಡ್ ಮಾಡಿ ಪರ್ಮನೆಂಟಾಗಿ ಜೈಲಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಯಾಕೆಂದರೆ ಸರಕಾರದ 15ನೇ ಹಣಕಾಸಿನ ಹಣವನ್ನು ಸಂಪೂರ್ಣ ಕೊಳ್ಳೆ ಹೊಡೆಯಲಾಗಿದ್ದು. ಬೋಗಸ್ ಕಾಮಗಾರಿಗಳನ್ನು ಸೃಷ್ಟಿ ಮಾಡಿದ್ದು ಅಲ್ಲದೆ ಸ್ಥಳೀಯ ದಲ್ಲಾಳಿಗಳಿಗೆ ಕಮಿಷನ್ ತೆಗೆದುಕೊಂಡು ಇಲ್ಲಿನ ಪಿಡಿಒಗಳು 15ನೇ ಹಣಕಾಸನ್ನು ಸಂಪೂರ್ಣ ದುರ್ಬಳಕೆ ಮಾಡಿದ್ದಾರೆ ಈ ಕುರಿತು ಸಂಪೂರ್ಣ ತನಿಖೆಯಾಗಬೇಕು ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ತನಿಖೆ ನಡೆಸದೆ ನಿರ್ಲಕ್ಷ್ಯ ವಹಿಸಿದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಪ್ರಾಧಿಕಾರಕ್ಕೆ ದೂರನ್ನು ನೀಡಲಾಗುವುದು ಎಂದು ವಕೀಲರಾದ ಮಹಬೂಬ್ ಸಾಬ್ ಚೌದರಿ ಬಿಳವಾರ ಅವರು ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















