ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಲ್ಲಾ ಗ್ರಾಮಗಳ ಜಾತಿ ಭೇದವಿಲ್ಲದೆ ಸಮಗ್ರ ಅಭಿವೃದ್ಧಿ- ಜನಾರ್ದನ್ ರೆಡ್ಡಿ

ಸಿಂಧನೂರು//ಮಾ5. ಇಂದು ಕಲ್ಯಾಣರಾಜ್ಯ ಪ್ರಗತಿಪಕ್ಷ ಸಂಸ್ಥಾಪಕರಾದ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಹಾಗೂ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಸಿಂಧನೂರು ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿಯವರ ನೇತೃತ್ವದಲ್ಲಿ ಸಿಂಧನೂರು ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುವ ಜಾಲಿಹಾಳ ಕೆ ಹೊಸಳ್ಳಿ ಹಾಗೂ ಕೆ ಹಂಚಿನಾಳ ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮದ ಜನರು ಬೈಕ್ ರ‍್ಯಾಲಿ, ಡೊಳ್ಳು ವಾದ್ಯಗಳು ಹಾಗೂ ಪಟಾಕಿ ಬಿಡುವ ಮೂಲಕ ತುಂಬಾ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು. ನಂತರ ಗ್ರಾಮದ ಜನತೆ ಕುಂದು ಕೊರತೆಗಳು ವಿಚಾರಿಸಿ ಅವುಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು ಹಾಗೂ ಗ್ರಾಮಗಳ ದೇವಸ್ಥಾನಗಳಿಗೆ ಭೇಟಿ ನೀಡಿ ಕನ್ನಡ ರಾಜ್ಯ ಪ್ರಗತಿ ಪಕ್ಷದ ಏಳಿಗೆ ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಮಾತನಾಡಿ, ಎಲ್ಲಾ ಗ್ರಾಮಗಳನ್ನು ಜಾತಿ ಭೇದವಿಲ್ಲದೆ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು.ಮತ್ತು ಈ ಭಾಗದ ರೈತರಿಗೆ ಒಳಿತಿಗಾಗಿ ಸಮಾನಾಂತರ ಜಲಸಕ್ಕೆ ನಿರ್ಮಾಣಕ್ಕೆ ವರ್ತನೆ ನೀಡುತ್ತೇನೆ, ಮಹಿಳೆಯರ ಅಭಿವೃದ್ಧಿ ನಾನಾ ಯೋಜನೆಗಳನ್ನು ಜಾರಿಗೆ ತರುವೆ, ಯುವಕ ಯುವತಿಯರಿಗೆ ಉದ್ಯೋಗಗಳನ್ನು ಒದಗಿಸುವೆ. ಸಿಂಧನೂರು ಭಾಗದಲ್ಲಿ ಕಾರ್ಖಾನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮಗಳ ವಿವಿಧ ಪಕ್ಷದ ಮುಖಂಡರು, ಉತ್ಸಾಹಿ ಯುವಕರು ಕಲ್ಯಾಣ ರಾಜ ಪ್ರಗತಿಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮದ ಅನೇಕ ಮುಖಂಡರು, ಜನಾರ್ಧನ್ ರೆಡ್ಡಿ ಅಭಿಮಾನಿ ಬಳಗ, ಮಲ್ಲಿಕಾರ್ಜುನ ನೆಕ್ಕಂಟಿ ಅಭಿಮಾನಿ ಬಳಗ, ಯುವ ಮುಖಂಡ ಶಿವು ಹಿರೇಮಠ , ಹನುಮಗೌಡ ಹಟ್ಟಿ, ಪ್ರತಾಪ್ ರೆಡ್ಡಿ, ಹಾಗೂ ಅನೇಕ ಮುಖಂಡರು ಉಪಸ್ಥಿತಿಯಲ್ಲಿದ್ದರು.
ವರದಿ// ವೆಂಕಟೇಶ.ಹೆಚ್. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ