ಬಳ್ಳಾರಿ / ಕಂಪ್ಲಿ : ‘ಸಣ್ಣ ಮಕ್ಕಳಿಗೆ ಬಲತ್ಕಾರ ಕಡಿಮೆ ಆಯಿತು, ನರಮಾನವನ ಅಹಂಕಾರದಿಂದ ಭೂಮಿ ತಾಯಿ ಬಾಯಿತೆಗೆದಾಳು. ದೈವದ ಮಳೆ ದೈವದ ಬೆಳೆ, ಕೆಂಪು ಕುದುರೆ, ಬಿಳಿ ಕುದರೆ ಹಿಂದಕ್ಕೆ, ಮುಂದಕ್ಕೆ ಹೋಗಿ ಗಗನಕ್ಕೆ ಹಾರಿತು……!
ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಅಲಾಯಿ ಕುಣಿ (ಅಗ್ನಿಕುಂಡ) ಹಾಯುವ ಮುನ್ನ ಮೌಲಾಲಿ ತಾತನನ್ನು ಹೊತ್ತಿದ್ದ ಗ್ರಾಮದ ರಫಿಕ್ ತಾತ ಅವರು ನುಡಿದ ಕಾರ್ಣೀಕೋತ್ಸವದ ಭವಿಷ್ಯವಾಣಿ ಇದು.
ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.ಪರಿಸರ ಮುನಿಸಿಕೊಂಡು ಮಳೆ ಬೆಳೆ ಕಡಿಮೆಯಾಗಬಹುದು,ನ್ಯಾಯನೀತಿಯಿಂದ ನಡೆದಕೊಂಡವರಿಗೆ ದೈವ ಕೈಹಿಡಿಯುತ್ತದೆ.ಮೆಣಸಿನಕಾಯಿ,ಅಕ್ಕಿ,ಹತ್ತಿದರ ಹೆಚ್ಚಳ ಸಾಧ್ಯತೆ ಇದೆ ಎಂದು ಹಬ್ಬದಲ್ಲಿ ನೆರೆದಿದ್ದ ಜನರು ವಿಶೇಷವಾಗಿ ರೈತರು ವ್ಯಾಖ್ಯಾನಿಸಿದರು. ಮೊಹರಂ ಹಬ್ಬದ ನಿಮಿತ್ತ ಅಲಾಯಿ ಕುಣಿ ಹಾಯುವುದು, ತನಗೊಡ ತರುವುದು, ಪಲ್ಲಕ್ಕಿ,ಗಂಗೆಸ್ಥಳ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ,ಭಕ್ತಿಯಿಂದ ಜರುಗಿದವು.ಗ್ರಾಮದ ಕೆಲವರು ವಿವಿಧ ರೀತಿಯ ಹರಕೆಗಳನ್ನು ತೀರಿಸಿದರು.
ಮೊಹರಂದ ಹಬ್ಬದ್ ನಿಮಿತ್ತ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಮೌಲಾಲಿತಾತ ಸೇರಿದಂತೆ ವಿವಿಧ ಪೀರಲದೇವರುಗಳ ಅದ್ದೂರಿ ಮೆರವಣಿಗೆಮತ್ತು ವಿಸರ್ಜನೆ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿದವು.
ವರದಿ : ಜಿಲಾನಸಾಬ್ ಬಡಿಗೇರ್




















