
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸ್ಪಿಕ್ ಲಿಮಿಟೆಡ್ ಮತ್ತು ಗ್ರೀನ್ ಸ್ಟಾರ್ ಫರ್ಟಿಲೈಸರ್ ಮೈಸೂರು ಇವರ ವತಿಯಿಂದ ದಳವಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣಾ ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ಮೊದಲಿಗೆ ನಿರೂಪಣೆಯನ್ನು ನಾಗೇಶ್ ನಿರ್ವಹಿಸಿದರು. ನಂತರ ಶಿಕ್ಷಕಿ ಶಿಲ್ಪಾ ಶ್ರೀ ಅವರು ಪ್ರಾರ್ಥನೆ ಹಾಡಿದರು.
ನಂತರ ವೇದಿಕೆಯಲ್ಲಿದ್ದ ಗಣ್ಯರನ್ನು ಸ್ವಾಗತಿಸಲಾಯಿತು. ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ದೀಪ ಬೆಳಗಿಸುವುದರ ಮೂಲಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿದರು. ಮೊದಲಿಗೆ ಪ್ರಾಸ್ತಾವಿಕ ನುಡಿಗಳನ್ನು ಸಂಸ್ಥೆಯ ಬಗ್ಗೆ ಸುದೀಪ್ ವ್ಯವಸ್ಥಾಪಕರು ವಿವರಿಸಿದರು. ನಂತರ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಮಾತನಾಡಿ ಈ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು ಹೆಮ್ಮೆಯ ವಿಚಾರವಾಗಿದೆ ದಳವಾಯಿ ಶಾಲೆಗೆ ಉಚಿತ ನೋಟ್ ಬುಕ್ ಕಂಪನಿಯಿಂದ ಹೆಚ್ಚುವರಿ ಆಗಿ ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ನಂತರ ನೆರೆದಿದ್ದ ಎಲ್ಲರಿಗೂ ಮಕ್ಕಳಿಗೂ ಶುಭಾಶಯವನ್ನು ಕೋರಿದರು. ಸಮಾರಂಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಶ್ರೀಧರ್ ಮಾಜಿ ಪುರಸಭಾ ಅಧ್ಯಕ್ಷರು, ಬಸವಣ್ಣ ಸೊಸೈಟಿ ಅಧ್ಯಕ್ಷರು, ಶ್ರೀಧರ್ ಮಂಜುನಾಥ್ ಆಗ್ರೋ ಪ್ರೊಪೋರೇಟರ್, ಶ್ರೀಮತಿ ಲೀಲಾವತಿ ಮುಖ್ಯ ಶಿಕ್ಷಕರು ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.




















