ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬುದ್ಧ ಮತ್ತು ನಾನು

ಅನುಸಂಧಾನದ ಪಾಲು ನಮಗೆಲ್ಲ
ಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾ
ಶಶಿ ನೇಸರನಂತೆ ಬುದ್ಧ ಬಂದಿದ್ದಾನೆ
ನಮ್ಮನುದ್ದರಿಸಲು ಎದ್ದು ಬಂದಿರಬಹುದು

ನಾನು ಯುದ್ಧವಂತು ಬೇಡವೆಂದೆ
ಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆ
ಶಾಂತಿ ಬಯಸದ ದೈತ್ಯಕಾರದ
ಯುದ್ಧದ ಕೇಡು ಉಕ್ರೆನ್ ನೋಡಿದಂತೆ
ರಕ್ತಮಂಡಲ ಮಾಸದ ಕಲೆಗಳು
ಬೊಧಿಮಂಡಲದ ನೆಲದೊಳಗೆ
ಇವೆಲ್ಲ ಬೇಡವೇ ಬೇಡ

ಬುದ್ಧನ ನಾಡಿನೊಳಗೆ ಖಡ್ಗ
ಆತ್ಮಹತ್ಯೆಗೆ ಶರಣಾಗಲಿ
ಖಡ್ಗದ ಮೊನೆಗೆ ಕ್ಷಾಮ ಬಂದು
ಅಸ್ತ್ರಗಳೆಲ್ಲ ನೆಲ ಕಚ್ಚಲಿ

ಬುದ್ಧನ ಅರಿವು-ಶರೀಫಜ್ಜನ ನಿಲುವು
ಬರಡು ಎದೆ ಹಸಿರಾಗಿಸಲಿ
ಶೋಕ ಸೃಷ್ಟಿಸುವ ಕೈಗೆ ರುಂಡವೆಲ್ಲ ಸಿಗದಂತೆ
ಖಡ್ಗಕ್ಕೂ ಬುದ್ದನೊಲಿಯಲಿ

ಕಾಡ ಕೂಸುಗಳೆಲ್ಲವೂ ಬುದ್ದನ ಮಕ್ಕಳೆಂದು
ಎದೆಗವಚಿ ಪ್ರೀತಿ ಬಾಚಲಿ
ಬಹುತ್ವದ ಬಂಧುತ್ವಕ್ಕೆ ಬುದ್ಧನ ಬೆಳದಿಂಗಳು
ಅನುರಣಿಸಿ ಪ್ರಖರತೆ ಮೂಡಲಿ

ಜಗದ ಭೋಗಕ್ಕೆ ಕರುಣೆ ಪ್ರೀತಿ ಸತ್ಯ
ಶಾಂತಿ ಎಂಬುದು ತಿಳಿಯಲಿ
ಬುದ್ಧನಿಲ್ಲದ ಮೇಲೆ ತಾರಾ ಸೂರ್ಯನಿಲ್ಲದ ನೀಲಿ ನಭಕೆ ಕಳೆ ಇರದು ತಿಳಿಯಲಿ

ಮತ್ತೆಂದಿಗೂ ಬಾಡದಂತೆ ಅರಳಿಯ ಬೇರಿನಂತೆ
ಸಮಾನತೆ ಎದೆಯೊಳಗೆ ಆಳಕ್ಕಿಳಿಯಲಿ
ಕೋಮುಗಲಭೆ ಅನಿಷ್ಟ ಅನಾಚಾರ
ಅಕುಶಲ ಅವಾಚ್ಯವಂತೂ ತೊಳೆದು ಹೋಗಲಿ

ಬೇಡವೇ ಬೇಡ ವಿಷದ ಬಟ್ಟಲು
ತುಟಿಯಂಚಿಗೆ ಒಡ್ಡುವುದು
ಅರಿವಿನ ಸಂಜ್ಞೆಯೊಳಗೆ
ಬುದ್ದನೆಂದರೆ ಜಗಬೆಳಗೊ ಬೆಳಕು ತಿಳಿಯಲಿ

-ಚನ್ನಪ್ಪ.ಎಸ್.ಬಾಗ್ಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ