ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರೈತರ ಬೃಹತ್ ಪ್ರತಿಭಟನೆ

ತುಮಕೂರು/ಪಾವಗಡ:ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪೂಜಾರಪ್ಪನವರ ನೇತೃತ್ವದಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಅಂಬೇಡ್ಕರ್ ವೃತದಿಂದ ಪ್ರಮುಖ ರಸ್ತೆ ಮುಖಾಂತರ ಹೊರಟು ಪ್ರತಿಭಟನಾಕಾರರು ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂದಿನ ಆವರಣದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಇವರನ್ನು ಉದ್ದೇಶಿಸಿ ಪೂಜಾರಪ್ಪನವರು ಮಾತನಾಡುತ್ತಾ, ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರ ಜಮೀನು ವಶಕ್ಕೆ ಪಡೆಯುವ ಪ್ರಯತ್ನ ನಿಲ್ಲಿಸಬೇಕು ಹಾಗೂ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಅಳತೆ ಪ್ರಮಾಣ ಮಾರು ರೂಪದಲ್ಲಿದ್ದು ಇದನ್ನು ಐದು ಅಡಿಗೆ ನಿಗದಿಗೊಳಿಸಿ ರೈತರಿಗೆ ಆಗುವ ವಂಚನೆಯನ್ನು ತಪ್ಪಿಸಬೇಕು ಮತ್ತು ತಾಲೂಕಿನ ಸಮಸ್ತ ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕೆಂದು ತಿಳಿಸಿದರು.

ರಾಜ್ಯ ಪ್ರಧಾನ ಮಹಿಳಾ ವಿಭಾಗ ಕಾರ್ಯದರ್ಶಿ ಶ್ರೀಮತಿ ಎನ್ ಮಂಜುಳಾ , ತುಮಕೂರು ಜಿಲ್ಲೆ ಕಾರ್ಯದರ್ಶಿ ಜೆ ಶಂಕರಪ್ಪ‌ , ದೊಡ್ಡಮಾಳಮ್ಮ, ಮಹಿಳಾ ಅಧ್ಯಕ್ಷರು ನಾಗರತ್ನಮ್ಮ, ಕೊರಟಗೆರೆ ಕಾರ್ಯದರ್ಶಿ ಶಬ್ಬೀರ್, ರೈತ ಮುಖಂಡ ನರಸಿಂಹ, ಉಪಾಧ್ಯಕ್ಷರು ಬಿ ಎಸ್ ಪಿ ಮಂಜುನಾಥ್, ನಾರಾಯಣಪ್ಪ ,ಕಾರ್ಯದರ್ಶಿ ನರಸಣ್ಣ , ಯುವ ಘಟಕದ ಅಧ್ಯಕ್ಷ ಕೋಳಿ ಬಾಲಾಜಿ, ಯುವ ಘಟಕದ ಅಧ್ಯಕ್ಷ ಶಿವು, ತಾಲೂಕು ಸಹ ಕಾರ್ಯದರ್ಶಿ ಚಿತ್ತಯ್ಯ, ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ಸಂಘಟಿತ ಕಾರ್ಮಿಕರ ಘಟಕ ಸುಶೀಲಮ್ಮ ಇನ್ನು ಅನೇಕ ರೈತರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ